ಅಜ್ಜನಹಳ್ಳಿಯಲ್ಲಿ ಇನ್ನೂ ಇದೆ ಚಿನ್ನದ ನಿಕ್ಷೇಪ
Team Udayavani, Dec 20, 2018, 6:25 AM IST
ಹೈದರಾಬಾದ್: ತುಮಕೂರಿನ ಶಿರಾ ತಾಲೂಕಿನಲ್ಲಿರುವ ಅಜ್ಜನ ಹಳ್ಳಿ ಚಿನ್ನದ ಗಣಿಯಲ್ಲಿ 1.26 ಮಿಲಿಯನ್ ಟನ್ಗಳಷ್ಟು ಚಿನ್ನವಿದೆ ಎಂದು ಭಾರತೀಯ ಭೂಗರ್ಭ ಶಾಸ್ತ್ರ ಇಲಾಖೆ (ಜಿಎಸ್ಐ) ಹೇಳಿದೆ.
ಈ ಚಿನ್ನದ ಗಣಿಯನ್ನು ಕೆಲವು ವರ್ಷಗಳ ಹಿಂದಷ್ಟೇ ಮುಚ್ಚಲಾಗಿತ್ತು. ಆರ್ಥಿಕವಾಗಿ ಸಾಧುವಲ್ಲದ ಕಾರಣ ಗಣಿಯನ್ನು ಮುಚ್ಚಿದ್ದು, ಈಗ ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ ಮರು ಆರಂಭಿಸಲು ಚಿಂತನೆ ನಡೆಸಲಾಗಿದೆ. ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯಲ್ಲಿ ಈ ಗಣಿ ಇದೆ.
ಇದಲ್ಲದೆ, ತಮಿಳುನಾಡಿನ ತಸಂಪಾಳ್ಯಂನಲ್ಲಿ ಅಂದಾಜು 0.402 ಮಿಲಿಯನ್ ಟನ್ಗಳಷ್ಟು “ಪ್ಲಾಟಿನಂ ಗ್ರೂಪ್ ಎಲಿಮೆಂಟ್ಸ್’ (ಪಿಜಿಇ) ಪತ್ತೆಯಾಗಿದ್ದು, ಇದರಲ್ಲಿ ಪ್ರತಿ ಟನ್ಗೆ 1.52ರಷ್ಟು ಪ್ಲಾಟಿನಂ ಹೊರತಗೆಯಬಹುದಾಗಿದೆ ಎಂದು ಜಿಎಸ್ಐನ ದಕ್ಷಿಣ ಪ್ರಾಂತ್ಯದ ಮಹಾ ನಿರ್ದೇಶಕ ಎಂ. ಶ್ರೀಧರ್ ತಿಳಿಸಿದ್ದಾರೆ. ಇದಲ್ಲದೆ, ಕರ್ನಾಟದ ಬೆಳಗಾವಿ ಜಿಲ್ಲೆ, ಆಂಧ್ರಪ್ರದೇಶದ ಗುಂಟೂರು, ಕರ್ನೂಲು ಜಿಲ್ಲೆ ಹಾಗೂ ತಮಿಳುನಾಡಿನ ಕುಡ್ಡಲೋರ್ ಜಿಲ್ಲೆಯಲ್ಲಿ ಸುಣ್ಣದ ಕಲ್ಲುಗಳ ನಿಕ್ಷೇಪ ಪತ್ತೆಯಾಗಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ