2 ಲ. ರೂ ಮೌಲ್ಯದ ಚಿನ್ನ ಖರೀದಿಗೆ ಪಾನ್, ಆಧಾರ್ ಬೇಕಿಲ್ಲ
Team Udayavani, Jan 10, 2021, 6:50 AM IST
ಹೊಸದಿಲ್ಲಿ: ಎರಡು ಲಕ್ಷ ರೂ. ಮೊತ್ತಕ್ಕಿಂತ ಕಡಿಮೆಯ ಚಿನ್ನ, ಬೆಳ್ಳಿ, ಆಭರಣ ಅಥವಾ ಅಮೂಲ್ಯ ಹರಳು ಮತ್ತು ಕಲ್ಲುಗಳ ಖರೀದಿಗೆ “ನಿಮ್ಮ ಗ್ರಾಹಕರನ್ನು ತಿಳಿಯಿರಿ – ಕೆವೈಸಿ’ ಯಡಿ ಪಾನ್ ನಂಬರ್ ಅಥವಾ ಆಧಾರ್ ಸಂಖ್ಯೆ ಒದಗಿಸುವುದು ಕಡ್ಡಾಯವಲ್ಲ ಎಂದು ವಿತ್ತ ಸಚಿವಾಲಯದ ಕಂದಾಯ (ಡಿಒಆರ್) ಸ್ಪಷ್ಟ ಪಡಿಸಿದೆ. ಪಿಎಂಎಲ್ ಆ್ಯಕ್ಟ್, 2002ರಡಿ 2020ರ ಡಿ. 28ರಂದು ಡಿಒಆರ್ ಈ ಸಂಬಂಧ ಆದೇಶ ಹೊರಡಿಸಿದೆ.
ಅತೀ ದೂರ ಯಾನಕ್ಕೆ ಸ್ತ್ರೀ ಶಕ್ತಿ ನೇತೃತ್ವ :
ಹೊಸದಿಲ್ಲಿ: ಸ್ಯಾನ್ಫ್ರಾನ್ಸಿಸ್ಕೊ- ಬೆಂಗ ಳೂರು ನಡುವೆ ಏರ್ ಇಂಡಿಯಾ (ಎಐ) ಆರಂಭಿಸಿರುವ ನಿಲುಗಡೆ ರಹಿತ ವಿಮಾನ ಸೇವೆಯ ಮೊದಲ ಯಾನ ಭಾರತೀಯ ವೈಮಾನಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ – ಇದರ ಕಾಕ್ಪಿಟ್ ಸಿಬಂದಿ ಎಲ್ಲರೂ ಸ್ತ್ರೀಯರು. ಕ್ಯಾ| ಝೋಯಾ ಅಗರ್ವಾಲ್ ಇದರ ಪ್ರಧಾನ ಪೈಲಟ್ ಆಗಿದ್ದರೆ, ಕ್ಯಾ| ಪಾಪಾಗಿರಿ ತನ್ಮಯಿ, ಕ್ಯಾ| ಆಕಾನ್ಶಾ ಸೋನಾವರೆ ಮತ್ತು ಕ್ಯಾ| ಶಿವಾನಿ ಮನ್ಹಸ್ ಸಹ ಪೈಲಟ್ಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್