ದತ್ ಬಿಡುಗಡೆ ಮಾಡಿದ್ದೇಕೆ?: ಹೈಕೋರ್ಟ್ ಪ್ರಶ್ನೆ
Team Udayavani, Jun 13, 2017, 12:43 AM IST
ಮುಂಬಯಿ: ಬಾಲಿವುಡ್ ನಟ ಸಂಜಯ್ ದತ್ಗೆ ಮತ್ತೆ ಸಂಕಷ್ಟ ಎದುರಾಗಿದೆ. 1993ರ ಸರಣಿ ಸ್ಫೋಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ದತ್ರನ್ನು ಅಷ್ಟು ಬೇಗ ಬಂಧನ ಮುಕ್ತರನ್ನಾಗಿ ಮಾಡಿದ್ದಕ್ಕೆ ಸಮರ್ಥನೆ ನೀಡುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ. ಅಲ್ಲದೆ, ಜೈಲು ವಾಸದಲ್ಲಿದ್ದ ಹೆಚ್ಚಿನ ಸಮಯವನ್ನು ದತ್ ಪೆರೋಲ್ನಲ್ಲೇ ಕಳೆದಿದ್ದಾರೆ. ಹೀಗಿರುವಾಗ, ಅವರ ನಡತೆ ಅಷ್ಟೊಂದು ಉತ್ತಮವಾಗಿತ್ತು ಎಂದು ಹೇಗೆ ನಿರ್ಧರಿಸಿದಿರಿ ಎಂಬ ತೀಕ್ಷ್ಣ ಪ್ರಶ್ನೆಯನ್ನೂ ಕೋರ್ಟ್ ವ್ಯಂಗ್ಯಮಿಶ್ರಿತ ಧ್ವನಿಯಲ್ಲಿ ಕೇಳಿದೆ. ದತ್ಗೆ 5 ವರ್ಷ ಜೈಲು ವಿಧಿಸಲಾಗಿತ್ತು. ಆದರೆ ಶಿಕ್ಷಾವಧಿ ಪೂರ್ಣಗೊಳ್ಳುವ 8 ತಿಂಗಳ ಮುನ್ನವೇ ಸನ್ನಡತೆ ನೆಪ ಹೇಳಿ ಬಿಡುಗಡೆಗೊಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?