ಗೂಗಲ್ನಲ್ಲಿ “ಇಂಡಿಯಾ ಕಿ ಉಡಾನ್’; ಕಲಾವಿದರ ಕಲಾಕೃತಿಗಳ ಪ್ರದರ್ಶನ
ಭಾರತದ ಸಾಧನೆ ವರ್ಣಿಸಲಿರುವ ಗೂಗಲ್
Team Udayavani, Aug 7, 2022, 7:40 AM IST
ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿರುವ ಈ ಶುಭ ಸಮಯದಲ್ಲಿ, ಭಾರತೀಯರೊಂದಿಗೆ ಗೂಗಲ್ ಸಂಸ್ಥೆ ಕೂಡ ಸಂಭ್ರಮಾಚರಣೆ ಮಾಡಲು ಸಿದ್ಧವಾಗಿದೆ. “ಇಂಡಿಯಾ ಕಿ ಉಡಾನ್’ ಯೋಜನೆ ಮೂಲಕ ಗೂಗಲ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಗೂಗಲ್ ಭಾರತದ ಪ್ರಸಿದ್ಧ ಕಲಾವಿದರಿಂದ ಭಾರತದ ಕಥೆ ಹೇಳುವಂತಹ ಚಿತ್ರಕಲೆಗಳು ಮತ್ತು ಕಲಾತ್ಮಕ ಉತ್ಪನ್ನಗಳನ್ನು ಪ್ರದರ್ಶಿಸಲಿದೆ. 10 ಕಲಾವಿದರಿಂದ ನಿರ್ಮಿಸಲಾಗಿರುವ 120ಕ್ಕೂ ಹೆಚ್ಚು ಕಲಾಕೃತಿಗಳು, 21ಕ್ಕೂ ಅಧಿಕ ಕಥೆಗಳನ್ನು ಪ್ರದರ್ಶಿಸಲಾಗುವುದು. ವಿವಿಧ ಇಲಾಖೆಗಳೂ ಈ ಪ್ರದರ್ಶನದಲ್ಲಿ ಭಾಗವಹಿಸಲಿವೆ. ಹಾಗೆಯೇ 1947ರ ನಂತರ ದೇಶದ ಅಭಿವೃದ್ಧಿಗೆ ಭಾರತೀಯರ ಕೊಡುಗೆಯನ್ನು ತಿಳಿಹೇಳುವಂತಹ ಮಾಹಿತಿಗಳನ್ನು ಜನರಿಗೆ ತಲುಪಿಸುವಲ್ಲೂ ಗೂಗಲ್ ಸರ್ಕಾರದ ಜತೆಯಾಗಲಿದೆ.
ಗೂಗಲ್ನ ಈ ಯೋಜನೆಯನ್ನು ನವದೆಹಲಿಯ ಸುಂದರ್ ನರ್ಸರಿಯಲ್ಲಿ ಶನಿವಾರ ಲೋಕಾರ್ಪಣೆಗೊಳಿಸಲಾಗಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ದೇಶದ 3000ಕ್ಕೂ ಅಧಿಕ ಸ್ಮಾರಕಗಳ ಗಡಿಯನ್ನು ನಕ್ಷೆ ಮಾಡುವುದಕ್ಕೆ ಗೂಗಲ್ ಸಹಾಯವನ್ನು ಕೇಳಿದ್ದಾರೆ. ಹಾಗೆಯೇ “ಹರ್ ಘರ್ ತಿರಂಗಾ’ ಅಭಿಯಾನಕ್ಕಾಗಿ ವಿಶೇಷ ಡೂಡಲ್ ತಯಾರಿಸಿಕೊಡುವಂತೆ ಸಂಸ್ಥೆಗೆ ಮನವಿ ಮಾಡಿದ್ದಾರೆ.
ಡೂಡಲ್ 4 ಗೂಗಲ್:
ಗೂಗಲ್ ಸಂಸ್ಥೆಯು 2022ರ ಡೂಡಲ್4ಗೂಗಲ್ ಸ್ಪರ್ಧೆಗೆ “ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ’ ಎನ್ನುವ ವಿಷಯವನ್ನೇ ಇಟ್ಟುಕೊಂಡಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ವಿಜೇತರಾಗುವ ವಿದ್ಯಾರ್ಥಿ ತಯಾರಿಸಿದ ಡೂಡಲ್ ಅನ್ನು ಆ.14ರಂದು ಗೂಗಲ್ನ ಹೋಮ್ಪೇಜ್(ಭಾರತಕ್ಕೆ ಮಾತ್ರ)ನಲ್ಲಿ ಹಾಕಲಾಗುವುದು. ಹಾಗೆಯೇ ವಿದ್ಯಾರ್ಥಿಗೆ 5 ಲಕ್ಷ ರೂ. ವಿದ್ಯಾರ್ಥಿ ವೇತನ ಮತ್ತು ಶಾಲೆಗೆ 2 ಲಕ್ಷ ರೂ. ತಂತ್ರಜ್ಞಾನ ಪ್ಯಾಕೇಜ್ ನೀಡಲಾಗುವುದು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್