ನಿವೃತ್ತಿ ಅಂಚಿನಲ್ಲಿರುವ ಕೇಂದ್ರ ನೌಕರರಿಗೆ ಪಿಂಚಣಿ ಆ್ಯಪ್
Team Udayavani, Sep 19, 2017, 3:03 PM IST
ಹೊಸದಿಲ್ಲಿ : ಇದೀಗ ನಿವೃತ್ತಿಯ ಸನಿಹದಲ್ಲಿರುವ ಕೇಂದ್ರ ಸರಕಾರಿ ನೌಕರರಿಗೆ ತಮ್ಮ ಪೆನ್ಶನ್ ಮತ್ತಿತರ ಪ್ರಕರಣಗಳ ವಿಲೇವಾರಿ ಕುರಿತ ವಿಷಯಗಳ ತಾಜಾ ಮಾಹಿತಿಗಳನ್ನು ಕೈಬೆರಳ ತುದಿಯಲ್ಲೇ ಪಡೆಯಲು ಅನುಕೂಲಿಸುವ ಮೊಬೈಲ್ ಅಪ್ಲಿಕೇಶನ್ ನಾಳೆ ಬುಧವಾರ ಬಿಡುಗಡೆಗೊಳ್ಳಲಿದೆ.
ಪೆನ್ಶನ್ ಲೆಕ್ಕಾಚಾರಗಳನ್ನು ತಿಳಿಯುವುದರೊಂದಿಗೆ ತಮ್ಮ ಯಾವುದೇ ದೂರುದುಮ್ಮಾನಗಳನ್ನು ಸರಕಾರಕ್ಕೆ ತಿಳಿಸಲು ಅನುಕೂಲವಿರುವ ಈ ನೂತನ ಆ್ಯಪ್ ನಿವೃತ್ತರಾಗಲಿರುವ ಕೇಂದ್ರ ಸರಕಾರಿ ನೌಕರರಿಗೆ ತುಂಬಾ ಪ್ರಯೋಜನಕಾರಿಯಾಗಬಲ್ಲುದು ಎಂದು ಸಿಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್ಶನ್ ಸಚಿವಾಲಯದ ಅಧಿಕೃತ ಪ್ರಕಟನೆ ತಿಳಿಸಿದೆ.
ಸಿಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್ಶನ್ ಖಾತೆಯ ಕೇಂದ್ರ ಸಹಾಯಕ ಸಚಿವ ಜೀತೇಂದ್ರ ಸಿಂಗ್ ಅವರು ಈ ನೂತನ ಆ್ಯಪನ್ನು ನಾಳೆ ಬುಧವಾರ ಬಿಡುಗಡೆ ಮಾಡಲಿರುವರು. ಈ ಆ್ಯಪ್ ಈಗ ತತ್ಕ್ಷಣಕ್ಕೆ ನಿವೃತ್ತರಾಗಲಿರುವ ಕೇಂದ್ರ ಸರಕಾರದ ಸುಮಾರು 300ಕ್ಕೂ ಅಧಿಕ ನೌಕರರಿಗೆ ಪ್ರಯೋಜನವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ