ಹೋರಾಟದ ಸಂಚು, ಜ.26ರ ಸ್ಕೆಚ್ ಗ್ರೆಟಾ ಟ್ವೀಟ್ ನಿಂದ ಬಯಲು!
ಭಾರತದ ಮರ್ಯಾದೆಯನ್ನು ಜಾಗತಿಕವಾಗಿ ಕಳೆಯುವ ಸಂಚೂ ಇತ್ತು.
Team Udayavani, Feb 4, 2021, 2:28 PM IST
ನವದೆಹಲಿ: ರೈತರ ಪ್ರತಿಭಟನೆ ಪರ ಧ್ವನಿಯೆತ್ತಿ ಸ್ವೀಡನ್ನ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್ ಮಾಡಿದ ಟ್ವೀಟ್ ಈಗ ಇಡೀ ಹೋರಾಟವನ್ನೇ ಪೇಚಿಗೆ ಸಿಲುಕಿಸಿದೆ! ಬುಧವಾರ ರೈತರನ್ನು ಬೆಂಬಲಿಸಿ ಗ್ರೆಟಾ ಮಾಡಿದ 2ನೇ ಟ್ವೀಟ್ ನಿಂದಾಗಿ “ರೈತ ಹೋರಾಟ ಒಂದು ವ್ಯವಸ್ಥಿತ ಸಂಚು’ ಎಂಬ ಶಂಕೆಗೆ ಬಲವಾದ ಪುಷ್ಟಿ ಸಿಕ್ಕಿದೆ.
ಇದನ್ನೂ ಓದಿ:ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಸಚಿವ ಕೋಟ ಸ್ಪಷ್ಟನೆ
ಟ್ವೀಟ್ ನಲ್ಲೇನಿದೆ?: ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದ ಕಂಪ್ಲೀಟ್ ನೀಲನಕ್ಷೆಯ ಟೂಲ್ ಕಿಟ್ ಅನ್ನು ಗ್ರೆಟಾ ಟ್ವೀಟ್ ಮಾಡಿದ್ದರು. ರೈತರು ಯಾವ ದಿನ, ಯಾವ ಹೆಜ್ಜೆ ಇಡಬೇಕು? ಹೇಗೆ ಹೋರಾಟ ಮಾಡಬೇಕು? ಎಂಬುದರ ಕುರಿತ ವಿವರಣೆ ಪಿಡಿಎಫ್ ಮಾದರಿಯ ಟೂಲ್ ಕಿಟ್ ನಲ್ಲಿದೆ. ಈ ಕಡತದ ಆರಂಭದಲ್ಲಿ “ಆಸ್ಕ್ಇಂಡಿಯಾವೈ’ ಹ್ಯಾಶ್ ಟ್ಯಾಗ್ ಇದ್ದು, “ನೀವು ಮಾನವ ಇತಿಹಾಸದ ಅತಿದೊಡ್ಡ ಪ್ರತಿಭಟನೆಗೆ ಭಾಗಿಯಾಗುತ್ತೀರಾ?’ ಎಂದು ಪ್ರಚೋ ದನಾತ್ಮಕ ಶೀರ್ಷಿಕೆಯನ್ನೂ ನೀಡಲಾಗಿದೆ.
ಜ.26ರ ಸ್ಕೆಚ್ ಬಯಲು: ಜನವರಿ 26ರ ಗಣರಾಜ್ಯೋತ್ಸವದಂದು ರೈತ ಹೋರಾಟ ಯಾವ ಹೆಜ್ಜೆ ಇಡಬೇಕು ಎಂಬುದೂ ಟೂಲ್ಕಿಟ್ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಫೆ.13-14ರಂದು ದೆಹಲಿಯಲ್ಲಿನ ಎಲ್ಲ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ, ಭಾರತದ ಮರ್ಯಾದೆಯನ್ನು ಜಾಗತಿಕವಾಗಿ ಕಳೆಯುವ ಸಂಚೂ ಇತ್ತು. ಹೋರಾಟದ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆಲ್ಲ ಪ್ರಚೋದನೆ ನೀಡಬೇಕು, ಪ್ರಚೋದನಾತ್ಮಕ ವಿಡಿ ಯೊ- ಫೋಟೋಗಳನ್ನು ಯಾರಿಗೆಲ್ಲ ಟ್ಯಾಗ್ ಮಾಡಬೇಕು ಎಂದು ವಿವರಿಸಲಾಗಿದೆ.
ಮೋದಿ ವಿರುದ್ಧ ಪ್ರಚೋದನೆ: ಟೂಲ್ ಕಿಟ್ನ ಹೋರಾಟದ ರೂಪುರೇಷೆಗಳ ನಡುವೆ ಪ್ರಧಾನಿ ವಿರುದ್ಧ ರೈತರನ್ನು ಪ್ರಚೋದಿಸುವಂಥ ಸಾಲುಗಳೂ ಇವೆ. “ಮೋದಿ ಮತ್ತು ಅವರ ಪಕ್ಷದ ಸದಸ್ಯರು ಆರೆಸ್ಸೆಸ್ನ ದೀರ್ಘಕಾಲದ ಸದಸ್ಯರು. ಫ್ಯಾಸಿಸ್ಟ್ ಸಿದ್ಧಾಂತದ ಬೇರಿನೊಂದಿಗೆ ಶಕ್ತಿಶಾಲಿಯಾಗಿ ಬೆಳೆದ ಸಮೂಹ ಇದು. ಮುಸ್ಲಿಂವಿರೋಧಿ, ಕ್ರಿಶ್ಚಿ ಯನ್ ವಿರೋಧಿಯಾದ ಈ ಗುಂಪು ಹಿಂದೂ ರಾಷ್ಟ್ರೀಯತೆಯನ್ನೂ ಭಾರತದಲ್ಲಿ ಬೆಳೆಸಲಿದೆ’ ಎಂಬ ಸಾಲು ಗಳೂ ಇವೆ.
ಟ್ವೀಟ್ ಡಿಲೀಟ್!
ವ್ಯವಸ್ಥಿತ ಹೋರಾಟ ಎನ್ನುವುದಕ್ಕೆ ಬಲವಾದ ಅಂಶಗಳನ್ನು ಹೊಂದಿದ್ದ ಈ ಟೂಲ್ ಕಿಟ್ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದ್ದಂತೆಯೇ ಗ್ರೆಟಾ ಇದನ್ನು ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಾಗಲೆ, ಬಿಜೆಪಿಯ ಹಲವು ಪ್ರಮುಖರು ಈ ಟೂಲ್ ಕಿಟ್ ಅನ್ನು ಟ್ವೀಟಿಸಿ, ನಕಲಿ ಪ್ರತಿಭಟನಾಕಾರರ ಮುಖವಾಡ ಕಳಚಿದ್ದಾರೆ. ನೇರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?