ಶೇ. 12, 18ರ ಜಿಎಸ್ಟಿ ವಿಲೀನ?
ರಾಜ್ಯಗಳಿಗೆ ಪರಿಹಾರ ನೀಡುವ ಅಗತ್ಯವಿಲ್ಲ: ಜೇಟ್ಲಿ
Team Udayavani, Jul 2, 2019, 6:00 AM IST
ನವದೆಹಲಿ: ಜಿಎಸ್ಟಿಯ ಶೇ.12 ಮತ್ತು ಶೇ.18ರ ಸ್ಲ್ಯಾಬ್ಗಳು ಲೀನವಾಗುತ್ತವೆಯೇ?
ಈ ಬಗ್ಗೆ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ. ಜಿಎಸ್ಟಿ ಜಾರಿಯಾಗಿ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಎರಡು ಸ್ಲ್ಯಾಬ್ಗಳನ್ನು ವಿಲೀನಗೊಳಿಸಬಹುದು ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, 20 ರಾಜ್ಯಗಳು ಜಿಎಸ್ಟಿ ಅಡಿಯಲ್ಲಿ ಶೇ. 14ರಷ್ಟು ಹೆಚ್ಚು ಆದಾಯವನ್ನು ಗಳಿಸುತ್ತಿದ್ದು, ಇನ್ನೂ ರಾಜ್ಯಗಳಿಗೆ ತೆರಿಗೆ ನಷ್ಟದ ಪರಿಹಾರವನ್ನು ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬಹುತೇಕ ಗೃಹ ಬಳಕೆಯ ಸಾಮಗ್ರಿಗಳನ್ನು ಶೇ.12., ಶೇ.18 ಹಾಗೂ ಶೇ.5ರ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಐಷಾರಾಮಿ ಹಾಗೂ ತಂಬಾಕು ಉತ್ಪನ್ನಗಳಿಗೆ ಮಾತ್ರ ಶೇ.28ರ ತೆರಿಗೆ ವಿಧಿಸಲಾಗಿದೆ. ಈ ಸ್ಲ್ಯಾಬ್ನಲ್ಲಿ ಉಳಿದ ಇತರೆಲ್ಲ ಸಾಮಗ್ರಿಗಳನ್ನೂ ಬೇರೆ ಸ್ಲ್ಯಾಬ್ಗಳಿಗೆ ವರ್ಗಾವಣೆ ಮಾvಲಾಗಿದೆ. ಆದಾಯದ ಪ್ರಮಾಣ ಹೆಚ್ಚುತ್ತಿದ್ದಂತೆ ಶೇ. 12 ಮತ್ತು ಶೇ. 18 ಅನ್ನು ವಿಲೀನಗೊಳಿಸಬಹುದು. ಶೂನ್ಯ ಹಾಗೂ ಶೇ.5ರ ಸ್ಲ್ಯಾಬ್ಗಳು ಎಂದಿಗೂ ಉಳಿದುಕೊಳ್ಳುತ್ತವೆ ಎಂದಿದ್ದಾರೆ.
ಈ ಮಧ್ಯೆ, ದೇಶಾದ್ಯಂತ ಒಂದೇ ರೀತಿಯ ತೆರಿಗೆ ವಿಧಿಸುವುದು ಸಾಧ್ಯವಿಲ್ಲ. ಇದು ಬಡವರೇ ಇಲ್ಲದ ದೇಶಗಳಿಗೆ ಹೊಂದಿಕೆಯಾಗಬಹುದು. ಆದರೆ ಭಾರತದಂಥ ದೇಶಗಳಿಗೆ ನಾನಾ ರೀತಿಯ ತೆರಿಗೆ ಅವಶ್ಯಕವಾಗಿದೆ ಎಂದು ಜೇಟ್ಲಿ ತಮ್ಮ ಪೋಸ್ಟ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
1 ಲಕ್ಷ ಕೋಟಿಗಿಂತ ಇಳಿಕೆಯಾದ ಜಿಎಸ್ಟಿ ಸಂಗ್ರಹ: ಜೂನ್ ತಿಂಗಳ ಸರಕು ಮತ್ತು ಸೇವಾ ತೆರಿಗೆ 1 ಲಕ್ಷ ಕೋಟಿ ರೂ.ಗಿಂತ ಇಳಿಕೆ ಕಂಡಿದ್ದು, 99,939 ಕೋಟಿ ರೂ. ಸಂಗ್ರಹವಾಗಿದೆ. ಮೇ ತಿಂಗಳಲ್ಲಿ 1,00,289 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಜೂನ್ನ ಕೇಂದ್ರೀಯ ಜಿಎಸ್ಟಿ 18,366 ಕೋಟಿ ರೂ, ರಾಜ್ಯ ಜಿಎಸ್ಟಿ 25,343 ಕೋಟಿ ರೂ. ಹಾಗೂ ಸಮಗ್ರ ಜಿಎಸ್ಟಿ 47,772 ಕೋಟಿ ರೂ. ಸಂಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ