ಹಿಂಸೆ, ಕ್ರೌರ್ಯದಿಂದ ಪರಿಹಾರ ಅಸಾಧ್ಯ: ಪ್ರಧಾನಿ ಮೋದಿ
Team Udayavani, Jun 25, 2018, 9:30 AM IST
ಹೊಸದಿಲ್ಲಿ: ಹಿಂಸೆ ಮತ್ತು ಕ್ರೌರ್ಯದಿಂದ ಯಾವುದೇ ಸಮಸ್ಯೆ ಪರಿಹರಿಸಲಾಗದು. ಸತ್ಯ ಮತ್ತು ಅಹಿಂಸೆಯೇ ಅಂತಿಮವಾಗಿ ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರವಿವಾರ 45ನೇ ಆವೃತ್ತಿಯ ‘ಮನ್ ಕಿ ಬಾತ್’ನಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. 1919 ಎ.3ರಂದು ಜಲಿಯನ್ ವಾಲಾಬಾಗ್ ನಲ್ಲಿ ಬ್ರಿಟಿಷ್ ಅಧಿಕಾರಿ ಜನರಲ್ ಡೈರ್ ಆದೇಶದ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಲಾದ ಭೀಕರ ಹಿಂಸಾಕೃತ್ಯಕ್ಕೆ 2019ರ ಎ.3ರಂದು 100 ವರ್ಷ ಪೂರ್ತಿಯಾಗಲಿದೆ.
ರವಿವಾರ ಮಾತನಾಡಿದ ಮೋದಿ, ‘ಹಿಂಸೆಯಿಂದ ಯಾವುದೇ ಗುರಿ ಸಾಧಿಸಲಾಗದು. ಸಾಧಿಸಲಾಗದೇ ಇರುವುದನ್ನು ಸಾಧಿಸಲು ಶಾಂತಿ, ಅಹಿಂಸೆ, ತ್ಯಾಗ, ಹುತಾತ್ಮತೆ ನೆರವಾಗುತ್ತದೆ’ ಎಂದು ಹೇಳಿದ್ದಾರೆ. ಪ್ರಧಾನಿ ಯಾವುದೇ ಘಟನೆಯನ್ನು ಉಲ್ಲೇಖೀಸಿ ಮಾತನಾಡದೇ ಇದ್ದರೂ, ಹಾಪುರದಲ್ಲಿ ವ್ಯಕ್ತಿಯನ್ನು ಥಳಿಸಿ ಕೊಂದ ಘಟನೆಗೆ ಸಂಬಂಧಿಸಿ ಅವರ ಮಾತುಗಳು ಮಹತ್ವದ್ದಾಗಿದೆ. ಇದೇ ವೇಳೆ, ಜಲಿಯನ್ವಾಲಾಬಾಗ್ ದುರಂತವನ್ನೂ ಸ್ಮರಿಸಿರುವ ಮೋದಿ, ಅದು ಇಡೀ ಮಾನವತೆಗೆ ನಾಚಿಕೆಯಾಗುವ ವಿಚಾರ. ಅದನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಜತೆಗೆ, ಗುರು ನಾನಕ್ ಮತ್ತು ಕಬೀರ್ ದಾಸ್ ಅವರ ಬೋಧನೆಗಳು ಯಾವತ್ತಿಗೂ ಪ್ರಸ್ತುತವೇ. 2019ರಲ್ಲಿ ಗುರು ನಾನಕ್ ದೇವ್ ಅವರ 550ನೇ ಜನ್ಮ ದಿನವನ್ನು ‘ಪ್ರಕಾಶ ದಿನ’ವನ್ನಾಗಿ ಆಚರಿಸಲಾಗುತ್ತದೆ ಎಂದರು. ಜೂ.28ರಂದು ಮಘರ್ ಎಂಬಲ್ಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕಬೀರ್ ದಾಸ್ರನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರನ್ನು ಸ್ಮರಿಸಿದ ಮೋದಿ, ದೇಶದ ಏಕೀಕರಣದಲ್ಲಿ ಅವರ ಪಾತ್ರ ಮಹತ್ವದ್ದು ಎಂದಿದ್ದಾರೆ.
ರಶೀದ್ಗೆ ಶ್ಲಾಘನೆ: IPLನಲ್ಲಿ ಉತ್ತಮ ಪ್ರದರ್ಶನ ತೋರಿದ ಅಫ್ಘಾನಿ ಸ್ಥಾನದ ಕ್ರಿಕೆಟಿಗ ರಶೀದ್ ಖಾನ್, ಯೋಗ ದಿನದಂದು ಗಗನದಲ್ಲಿ ಯೋಗಾಸನ ಮಾಡಿದ IAF ಡೈವರ್ಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಜು.1ಕ್ಕೆ ಜಿಎಸ್ಟಿ ಜಾರಿಯಾಗಿ ವರ್ಷ ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಬಗ್ಗೆ ಪ್ರಸ್ತಾವಿಸಿದ ಪ್ರಧಾನಿ, ‘GST ಒಕ್ಕೂಟ ವ್ಯವಸ್ಥೆಯ ಸಹಕಾರಕ್ಕೆ ಅತ್ಯುತ್ತಮ ಉದಾಹರಣೆ’ ಎಂದಿದ್ದಾರೆ. ಹೊಸ ವ್ಯವಸ್ಥೆ ಪ್ರಾಮಾಣಿಕತೆ ಉತ್ಸವ.ಅದು ದೇಶದಲ್ಲಿ ಇನ್ಸ್ಪೆಕ್ಟರ್ ರಾಜ್ ಗೆ ಕೊನೆ ಹಾಡಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ