ಗುಜರಾತ್: ವಸತಿ ಕಟ್ಟಡ ಕುಸಿತ; ಮೂವರು ಪಾರು, ಐವರು ಅವಶೇಷಗಳಡಿ
Team Udayavani, Aug 27, 2018, 11:34 AM IST
ಅಹ್ಮದಾಬಾದ್ : ಇಲ್ಲಿನ ಓಧವ್ ಪ್ರದೇಶದಲ್ಲಿ ನಿನ್ನೆ ಕುಸಿದಿದ್ದ ನಾಲ್ಕು ಮಹಡಿಯ ಕಟ್ಟಡದ ಅವಶೇಷಳಗಡಿ ಸಿಲುಕಿದ್ದವರಲ್ಲಿ ಮೂವರನ್ನು ಜೀವಸಹಿತ ಪಾರುಗೊಳಿಸಲಾಗಿದೆ; ಆದರೆ ಇನ್ನೂ ಐವರು ಅವಶೇಷಗಳಡಿ ಸಿಲುಕಿಕೊಂಡಿದ್ದು ಅವರನ್ನು ಹೊರತರುವ ಕಾರ್ಯಾಚರಣೆ ಈಗಲೂ ಸಾಗಿದೆ. ಕಟ್ಟಡ ಕುಸಿದ ಸುದ್ದಿ ತಿಳಿದೊಡನೆಯೇ ನಾಲ್ಕು ಅಗ್ನಿಶಾಮಕ ಘಟಕಗಳು ಸ್ಥಳಕ್ಕೆ ಧಾವಿಸಿ ಬಂದವು; ಇದೇ ರೀತಿ ಗಾಂಧೀನನಗರದಿಂದ ರಾಷ್ಟ್ರೀಯ ವಿಪತ್ತು ಸ್ಪಂದನ ದಳದ (ಎನ್ಡಿಆರ್ಎಫ್) ಎರಡು ತಂಡಗಳು ಕೂಡ ಧಾವಿಸಿ ಬಂದಿದ್ದವು. ಕುಸಿದು ಬಿದ್ದ ಈ ಕಟ್ಟಡದಲ್ಲಿ ಒಟ್ಟು 32 ಫ್ಲ್ಯಾಟುಗಳಿವೆ. ಕಟ್ಟಡವು ದುರ್ಬಲವಾಗಿರುವ ಬಗ್ಗೆ ನೊಟೀಸ್ ನೀಡಲಾಗಿದ್ದು ನಿವಾಸಿಗಳನ್ನು ತೆರವುಗೊಳಿಸಲಾಗಿತ್ತು ಎಂದು ಅಗ್ನಿ ಶಾಮಕ ದಳದ ಹೆಚ್ಚುವರಿ ಮುಖ್ಯಸ್ಥ ರಾಜೇಶ್ ಭಟ್ ತಿಳಿಸಿದ್ದಾರೆ. ಹಾಗಿದ್ದರೂ ಕಟ್ಟಡ ಕುಸಿದ ದುರಂತಕ್ಕೆ ಮುನ್ನ ಕೆಲವರು ಕಟ್ಟಡವನ್ನು ಹೇಗೆ ಮತ್ತು ಏಕೆ ಪ್ರವೇಶಿಸಿದರು ಎಂಬುದು ಗೊತ್ತಾಗಿಲ್ಲ; ಅದನ್ನು ದೃಡ ಪಡಿಸಿಕೊಳ್ಳುವ ಯತ್ನ ನಡೆದಿದೆ ಎಂದು ಭಟ್ ಹೇಳಿದರು. ಹತ್ತು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಇಬ್ಬರನ್ನು ಪಾರುಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಈಗಲೂ ಸಾಗಿದೆ ಎಂದು ರಾಜೇಶ್ ಭಟ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ