ಇಸ್ರೋ ಕ್ಷಿಪಣಿ ರಾಮನ ಬಾಣದಂತೆ: ಸಿಎಂ ರೂಪಾನಿ
Team Udayavani, Aug 28, 2017, 7:00 AM IST
ಅಹಮದಾಬಾದ್: “ಇಸ್ರೋ’ ಉಪಗ್ರಹ ಉಡ್ಡಯನ ಮತ್ತು ಸಂಶೋ ಧನೆಯಲ್ಲಿ ತೊಡಗಿಸಿಕೊಂಡಿದೆ ಎನ್ನುವುದು ಜಗ ತ್ತಿಗೇ ಗೊತ್ತು. ಆದರೆ, ಗುಜರಾತ್ ಸಿಎಂ ವಿಜಯ್ ರೂಪಾನಿ ಎಲ್ಲರೂ ಅವಕ್ಕಾಗುವ ಹೇಳಿಕೆ ನೀಡಿದ್ದು, ನಗೆಪಾಟಲಿಗೀಡಾಗಿದ್ದಾರೆ.
ಇಲ್ಲಿನ ಐಐಟಿ ಆರ್ಎಎಂ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ರೂಪಾನಿ, “ರಾಮನ ಪ್ರತಿ ಬಾಣ ಕ್ಷಿಪಣಿಗೆ ಸಮ. ಇದೇ ಕ್ಷಿಪಣಿ ತಯಾರಿಸುವ ಕೆಲಸ ಇಸ್ರೋ ಮಾಡುತ್ತಿದೆ. ರಾಮನೂ ಇಂತಹ ಕ್ಷಿಪಣಿ ಪ್ರಯೋಗಿಸುತ್ತಿದ್ದ’ ಎಂದು ಹೇಳಿದ್ದಾರೆ. ಅಲ್ಲದೇ “ಮೂಲಸೌಕರ್ಯಕ್ಕೂ ರಾಮಾಯಣಕ್ಕೂ ಸಂಬಂಧವಿದೆ. ರಾಮ ಶ್ರೀಲಂಕಾಕ್ಕೆ ಹೋಗಲು ಸೇತುವೆ ಕಟ್ಟಿದ್ದು, ರಾಮ ಎಂತಹ ಇಂಜಿನಿಯರ್ ಎಂಬುದನ್ನು ತೋರಿಸುತ್ತದೆ. ಅಳಿಲುಗಳೂ ಆ ಸೇತುವೆ ಕಟ್ಟಲು ನೆರವು ನೀಡಿದ್ದವು. ಇಂದಿಗೂ ಅದರ ಅವಶೇಷವಿದೆ. ರಾಮಸೇತು ರಾಮನ ಚಿಂತನೆಯಾಗಿದ್ದು, ಬಳಿಕ ಎಂಜಿನಿ ಯರ್ಗಳು ಅದನ್ನು ಕಟ್ಟಿದ್ದಾರೆ’ ಎಂದಿದ್ದಾರೆ. ಅವರು ಭಾಷಣ ಮಾಡುತ್ತಿರುವಾಗ ಇಸ್ರೋದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ತಪನ್ ಮಿಶ್ರಾ ಅವರೂ ಹಾಜರಿದ್ದರು.