ಗುಜರಾತ್ ಗಲಭೆ, ಮೊಘಲ್ ಅರಸರ ಪಠ್ಯ ಕೈಬಿಟ್ಟ ಎನ್ಸಿಇಆರ್ಟಿ
Team Udayavani, Jun 17, 2022, 5:27 PM IST
ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮಂಡಳಿ ಮತ್ತು ತರಬೇತಿ ಸಂಸ್ಥೆ (ಎನ್ಸಿಇಆರ್ಟಿ) 12ನೇ ತರಗತಿಗೆ ಸಂಬಂಧಿಸಿದ ಪಠ್ಯಕ್ರಮಗಳಲ್ಲಿ ಕೆಲವೊಂದು ಪರಿಷ್ಕರಣೆಗಳನ್ನು ಮಾಡಿದೆ.
ಗುಜರಾತ್ ಗಲಭೆ, ತುರ್ತು ಪರಿಸ್ಥಿತಿ, ಶೀತಲ ಸಮರ, ಮೊಘಲ್ ವಂಶದ ರಾಜರು ನಡೆಸಿದ ಆಳ್ವಿಕೆ, ಕೆಲವೊಂದು ಲೇಕಖರನ್ನು ಒಳಗೊಂಡ ಪಠ್ಯವನ್ನೂ ಕೈಬಿಡಲಾಗಿದೆ.
ಈ ಬಗ್ಗೆ ಎನ್ಸಿಇಆರ್ಟಿ ಪ್ರಕಟಿಸಿದ ಮಾಹಿತಿಯಲ್ಲಿ ಉಲ್ಲೇಖೀಸಲಾಗಿದೆ. ಮುಂದಿನ ತಿಂಗಳಿಂದ ಆರಂಭವಾಗುವ ಹೊಸ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯಕ್ರಮ ಜಾರಿಗೆ ಬರಲಿದೆ.
ಇಷ್ಟು ಮಾತ್ರವಲ್ಲದೆ 6ನೇ ತರಗತಿಯಿಂದ 12ನೇ ತರಗತಿ ವರೆಗಿನ ಪಠ್ಯಕ್ರಮವನ್ನೂ ಪರಿಷ್ಕರಿಸಲಾಗಿದೆ ಎಂದು ಮಂಡಳಿ ಹೇಳಿದೆ.
ಇದನ್ನೂ ಓದಿ:ಪಠ್ಯ ಹಿಂಪಡೆಯದಿದ್ದರೆ ಪರಿಸ್ಥಿತಿ ಕೈಮೀರುತ್ತದೆ: ನಾರಾಯಣ ಗೌಡ ಎಚ್ಚರಿಕೆ
ಪಠ್ಯಗಳಲ್ಲಿ ಪುನಾರವರ್ತನೆ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯ ಇಲ್ಲ ಎಂಬ ಹಿನ್ನೆಲೆಯಲ್ಲಿ ಈ ಬದಲಾವಣೆ ತರಲಾಗಿದೆ ಎಂದು ಸಮರ್ಥನೆ ನೀಡಿದೆ.