ಅಭಿಯಾನದಿಂದ ಹಿಂದೆ ಸರಿದ ಹುತಾತ್ಮ ಕಾರ್ಗಿಲ್ ಯೋಧನ ಪುತ್ರಿ
Team Udayavani, Feb 28, 2017, 11:40 AM IST
ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾಲಯದ ರಾಮ್ಜಾಸ್ ಕಾಲೇಜಿನಲ್ಲಿ ಕಳೆದ ಫೆ.22ರಂದು ಸಂಭವಿಸಿದ್ದ ಹಿಂಸಾತ್ಮಕ ಘಟನೆಯನ್ನು ವಿರೋಧಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಆನ್ಲೈನ್ ಅಭಿಯಾನವನ್ನು ಆರಂಭಿಸಿ ತೀವ್ರ ವಿವಾದವನ್ನು ಸೃಷ್ಟಿಸಿದ್ದ ದಿಲ್ಲಿ ವಿವಿ ವಿದ್ಯಾರ್ಥಿನಿ ಗುರ್ವೆುಹರ್ ಕೌರ್ ಇಂದು ತಾನು ಈ ಅಭಿಯಾನದಿಂದ ಹಿಂದೆ ಸರಿದಿರುವುದಾಗಿಯೂ ಇಂದು ನಡೆಯಲಿರುವ ಎಐಎಸ್ಎ ಜಾಥಾದಲ್ಲಿ ತಾನು ಪಾಲ್ಗೊಳ್ಳೆನೆಂದೂ ಟ್ವೀಟ್ ಮಾಡಿದ್ದಾಳೆ.
“ನಾನು ಅಭಿಯಾನದಿಂದ ಹಿಂದೆ ಸರಿಯುತ್ತಿದ್ದೇನೆ; ಎಲ್ಲರಿಗೂ ನನ್ನ ಅಭಿನಂದನೆಗಳು; ನನ್ನನ್ನು ಒಂಟಿಯಾಗಿರಲು ಬಿಡಿ ಎಂದು ಕೇಳಿಕೊಳ್ಳುತ್ತೇನೆ; ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೇನೆ; ತೋರಬೇಕಾಗಿದ್ದ ಧೈರ್ಯ, ದಿಟ್ಟತನವನ್ನು ತೋರಿಸಿದ್ದೇನೆ’ ಎಂದಾಕೆ ಹೇಳಿದ್ದಾಳೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್ ಮನ್ದೀಪ್ ಸಿಂಗ್ ಅವರ ಪುತ್ರಿಯಾಗಿರುವ ಗುರ್ವೆುಹರ್ ಕೌರ್, ದಿಲ್ಲಿಯ ರಾಮ್ಜಾಸ್ ಕಾಲೇಜಿನಲ್ಲಿ ಎಬಿವಿಪಿ ನಡೆಸಿದ್ದ ಹಿಂಸೆಯನ್ನು ಪ್ರತಿಭಟಿಸಿ ಆನ್ಲೈನ್ ಅಭಿಯಾನವನ್ನು ಆರಂಭಿಸಿದ್ದಳು. ಈ ನಡುವೆ ಆಕೆಗೆ ಜೀವ ಬೆದರಿಕೆ, ರೇಪ್ ಬೆದರಿಕೆ ಇತ್ಯಾದಿಗಳು ಬಂದಿದ್ದವು. ಆ ಬಗ್ಗೆ ಆಕೆ ದಿಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ರಕ್ಷಣೆಯನ್ನೂ ಬೇಡಿದ್ದಳು.
ಇಂದು ತನ್ನ ಈ ಅಭಿಯಾನದಿಂದ ತಾನು ಹಿಂದೆ ಸರಿಯುತ್ತಿರುವುದಾಗಿ ಆಕೆ ಮಾಡಿರುವ ಸರಣಿ ಟ್ವೀಟ್ನಲ್ಲಿ ಹೀಗೆ ಹೇಳಿದ್ದಾಳೆ :
“ನನ್ನ ದೈರ್ಯ, ಶೌರ್ಯವನ್ನು ಪ್ರಶ್ನಿಸುವವರಿಗೆ ನಾನು ಅದನ್ನು ಈಗಾಗಲೇ ಸಾಕಷ್ಟು ತೋರಿಸಿದ್ದೇನೆ. ಹಿಂಸೆಯ ವಿರುದ್ಧದ ಅಭಿಯಾನವನ್ನು ನಾನು ಕೈಗೊಂಡದ್ದು ನನಗಾಗಿ ಅಲ್ಲ; ವಿದ್ಯಾರ್ಥಿ ಸಮುದಾಯಕ್ಕಾಗಿ. ಮುಂದಿನ ಬಾರಿ ಹಿಂಸೆ, ಬೆದರಿಕೆಗಳು ಎದುರಾದಾಗ ನಾವು ಆ ಬಗ್ಗೆ ಎಚ್ಚರಿಕೆಯಿಂದ ಎರಡೆರಡು ಬಾರಿ ಯೋಚಿಸುವೆವು’.
ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಂದು ಕ್ಯಾಂಪಸ್ ಒಳಗೆ ಶಾಂತಿ ಮತ್ತು ಸುರಕ್ಷೆಗಾಗಿ, ಎಐಎಸ್ಎ ಕಾರ್ಯಕರ್ತರೊಂದಿಗೆ ಖಾಲ್ಸಾ ಕಾಲೇಜಿನಿಂದ ಜಾಥಾ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
MUST WATCH
ಹೊಸ ಸೇರ್ಪಡೆ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Politics: ಅಮಿತ್ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
Online Bitcoin Gambling Enterprises: An Overview to Betting with Cryptocurrency