ಮರ್ಸಿಡೀಸ್ ಕಾರನ್ನು ನಿಲ್ಲಿಸಿ ಮೂತ್ರಕ್ಕೆ ಹೋದಾತನ ಕಾರನ್ನೇ ಎಗರಿಸಿಕೊಂಡು ಹೋದರು.!
Team Udayavani, Dec 18, 2022, 8:45 AM IST
ನವದೆಹಲಿ: ಅಪರಿಚಿತ ವ್ಯಕ್ತಿಗಳು ಚಾಲಕನನ್ನು ಬೆದರಿಸಿ ಆತನ ದುಬಾರಿ ಕಾರನ್ನೇ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಗುರುಗ್ರಾಮ್ ಸೆಕ್ಟರ್ 29 ನಲ್ಲಿ ನಡೆದಿದೆ.
ಡಿ.15 ರಂದು ಅನೂಜ್ ಬೇಡಿ ತನ್ನ ಮರ್ಸಿಡೀಸ್ ಕಾರಿನಲ್ಲಿ ಮದ್ಯದ ಅಂಗಡಿಯಿಂದ ಮನೆಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ಮೂತ್ರಕ್ಕೆಂದು ರಸ್ತೆ ಬದಿ ಕಾರು ನಿಲ್ಲಿಸಿದ್ದಾರೆ. ಅದೇ ಸಮಯಕ್ಕೆ ಯಾರೋ ಅಪರಿಚಿತರು ಮತ್ತೊಂದು ಕಾರಿನಲ್ಲಿ ಬಂದು, ಅನೂಜ್ ಅವರ ಕಾರಿನ ಪಕ್ಕದಲ್ಲಿ ವಾಹನ ನಿಲ್ಲಿಸಿದ್ದಾರೆ. ಅದರಿಂದ ಇಳಿದ ಒಬ್ಬ ವ್ಯಕ್ತಿ ಅನೂಜ್ ಅವರನ್ನು ಹಿಡಿದು, ಚಾಕುವಿನಿಂದ ಬೆದರಿಸಿದ್ದಾರೆ. ಕೆಲ ಸಮಯದ ಬಳಿಕ ಅನೂಜ್ ಅವರ ಮರ್ಸಿಡೀಸ್ ಕಾರನ್ನು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಗುರುವಾರ ರಾತ್ರಿ 8.50ರ ಸುಮಾರಿಗೆ ಸೆಕ್ಟರ್ 29 ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ಮತ್ತು ಆಡಿ ಶೋರೂಂ ಚೌಕ್ ನಡುವೆ ಈ ಘಟನೆ ನಡೆದಿದೆ.ಈ ಬಗ್ಗೆ ಠಾಣೆಯಲ್ಲಿ ಅನೂಜ್ ದೂರು ದಾಖಲಿಸಿದ್ದಾರೆ.
ನಾವು ಈ ಕೃತ್ಯ ಎಸಗಿದವರನ್ನು ಅಕ್ಕಪಕ್ಕದ ಸಿಸಿಟಿವಿಯಿಂದ ಪತ್ತೆ ಹಚ್ಚುತ್ತಿದ್ದೇವೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುತ್ತದೆ ಎಂದು ಎಎಸ್ ಐ ಸಂದೀಪ್ ಕುಮಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು
Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್ ಆಡಲಿ: ಪೊವೆಲ್
ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್ಗೆ ಅಮೆರಿಕ ಸಲಹೆ