ಪ್ರೀತಿಯ ನಾಯಿ ಕೊಂದಿದ್ದಕ್ಕೆ ಸೇಡು; ವಿಷಹಾಕಿ ಮೂರು ಚಿರತೆ ಕೊಂದ ವ್ಯಕ್ತಿ!
Team Udayavani, Aug 9, 2019, 2:51 PM IST
ಉತ್ತರಾಖಂಡ್: ತನ್ನ ಪ್ರೀತಿಯ ಸಾಕು ನಾಯಿಯನ್ನು ಹೊತ್ತೊಯ್ದಿದ್ದರಿಂದ ಆಕ್ರೋಶಗೊಂಡ ಹರಿದ್ವಾರದ ವ್ಯಕ್ತಿಯೊಬ್ಬ ವಿಷಹಾಕಿದ ಪರಿಣಾಮ ಮೂರು ಚಿರತೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡ್ ನ ರಾಜಾಜಿ ನ್ಯಾಷನಲ್ ಪಾರ್ಕ್ ನಲ್ಲಿ ನಡೆದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ತನ್ನ ಪ್ರೀತಿಯ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದ್ದು ಹಾಗೂ ಒಂದು ನಾಯಿಗೆ ಗಂಭೀರವಾಗಿ ಗಾಯಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ನಾಯಿಯ ಕಳೇಬರದ ಮೇಲೆ ವಿಷವನ್ನು ಸಿಂಪಡಿಸಿ ಅಭಯಾರಣ್ಯದೊಳಕ್ಕೆ ಎಸೆದಿರುವುದಾಗಿ ಆರೋಪಿ ಸುಖ್ ಪಾಲ್ ತಪ್ಪೊಪ್ಪಿಕೊಂಡಿರುವುದಾಗಿ ತಿಳಿಸಿದೆ.
ಪೋಸ್ಟ್ ಮಾರ್ಟಂ ನಲ್ಲಿ ಮೂರು ಚಿರತೆಗಳು ನಾಯಿ ಮಾಂಸ ತಿಂದು, ಅದರಲ್ಲಿದ್ದ ವಿಷದ ಅಂಶ ದೇಹದೊಳಕ್ಕೆ ಸೇರಿ ಸಾವನ್ನಪ್ಪಿರುವುದಾಗಿ ವಿಧಿವಿಜ್ಞಾನ ತಜ್ಞರು ವರದಿ ನೀಡಿದ್ದರು. ಆಗಸ್ಟ್ 5ರಂದು ರಾಜಾಜಿ ನ್ಯಾಶನಲ್ ಪಾರ್ಕ್ ನ ಬೇರೆ, ಬೇರೆ ವಿಭಾಗಗಳಲ್ಲಿ ಮೂರು ಚಿರತೆಗಳ ಶವ ಪತ್ತೆಯಾಗಿತ್ತು ಎಂದು ವರದಿ ವಿವರಿಸಿದೆ.
ಮೂರು ಚಿರತೆಗಳು ವಿಷಪೂರಿತವಾಗಿದ್ದ ನಾಯಿ ಮಾಂಸ ತಿಂದು ಸಾವನ್ನಪ್ಪಿರುವುದು ಖಚಿತವಾಗಿದೆ. ಅಲ್ಲದೇ ತಾನೇ ಸೇಡು ತೀರಿಸಿಕೊಳ್ಳಲು ವಿಷಹಾಕಿ ಚಿರತೆ ಸಾಯುವಂತೆ ಮಾಡಿರುವುದಾಗಿ ಸುಖ್ ಪಾಲ್ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸುಖ್ ಪಾಲ್ ನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, 12 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್