‘ಮಾಡಬಾರದ್ದನ್ನು ಮಾಡಿದ್ದಕ್ಕೆ ನನಗೇ ನಾಚಿಕೆಯಾಗುತ್ತಿದೆ’: ನತಾಶ ಡೆತ್ ನೋಟ್ ನಲ್ಲೇನಿದೆ?
Team Udayavani, Jan 23, 2020, 6:33 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ದೆಹಲಿ: ಅಟ್ಲಾಸ್ ಸೈಕಲ್ ಕಂಪೆನಿಯ ಮಾಲಕ ಸಂಜಯ್ ಕಪೂರ್ ಅವರ ಪತ್ನಿ ನತಾಶಾ ಕಪೂರ್ ಮಂಗಳವಾರದಂದು ದೆಹಲಿಯ ಔರಂಗಜೇಬ್ ಲೇನ್ ನಲ್ಲಿರುವ ತಮ್ಮ ಬಂಗಲೆಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದರು ಮತ್ತು ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ‘ಡೆತ್ ನೋಟ್’ ಒಂದನ್ನೂ ಸಹ ಬರೆದಿಟ್ಟಿದ್ದರು.
ನತಾಶಾ ಅವರ ಡೆತ್ ನೋಟ್ ನಲ್ಲಿ ಅವರು ಬರೆದುಕೊಂಡಿರುವ ಕೆಲವು ವಿಚಾರಗಳು ಅವರ ಆತ್ಮಹತ್ಯೆಗೆ ಅವರಲ್ಲಿ ಉಂಟಾಗಿದ್ದ ಪಾಪಪ್ರಜ್ಞೆಯೇ ಕಾರಣವಾಗಿತ್ತೇ ಎಂಬ ಸಂಶಯ ಮೂಡುವಂತೆ ಮಾಡಿದೆ.
57 ವರ್ಷದ ನತಾಶಾ ಅವರು ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದರು ಹಾಗೂ ಮನೆಯವರೆಲ್ಲರೂ ಚೆನ್ನಾಗಿರಬೇಕೆಂದು ಡೆತ್ ನೋಟ್ ನಲ್ಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ಆದರೆ ಆ ಡೆತ್ ನೋಟ್ ನಲ್ಲಿ ನತಾಶಾ ಅವರು ಬರೆದಿರುವ ಒಂದು ಅಂಶ ಮಾತ್ರ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ‘ನನ್ನ ಜೀವನವನ್ನು ನಾನೇ ಕೊನೆಗೊಳಿಸುತ್ತಿದ್ದೇನೆ. ಬೇರೆ ಯಾರೂ ಇದಕ್ಕೆ ಜವಾಬ್ದಾರರಲ್ಲ. ಮಾಡಬಾರದಾಗಿದ್ದ ಕೆಲಸವೊಂದನ್ನು ನಾನು ಮಾಡಿದ್ದೇನೆ. ನನ್ನ ಕುರಿತಾಗಿ ನನಗೇ ನಾಚಿಕೆಯುಂಟಾಗುತ್ತಿದೆ. ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ, ಸಂಜಯ್, ನನ್ನ ಮಗಳು ಮತ್ತು ನನ್ನ ಮಗನನ್ನು ನಾನು ತುಂಬಾ ಪ್ರೀತಿಸುತ್ತೇನೆ, ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂಬ ವಿಚಾರಗಳು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ.
‘ಮಾಡಬಾರದ ಕೆಲಸ ಮಾಡಿರುವುದಕ್ಕೆ ನನ್ನ ಕುರಿತಾಗಿಯೇ ನನಗೆ ನಾಚಿಕೆಯುಂಟಾಗುತ್ತಿದೆ ಎಂದು ನತಾಶಾ ಅವರು ಬರೆದುಕೊಂಡಿರುವುದು, ಅವರನ್ನು ಯಾವುದೋ ಒಂದು ತಪ್ಪು ಬಹುವಾಗಿ ಕಾಡುತ್ತಿತ್ತು ಮತ್ತು ಆ ನೋವಿನಿಂದ ಹೊರಬರಲಾರದೆ ಅವರು ಆತ್ಮಹತ್ಯೆಗೆ ಒಳಗಾಗುವ ನಿರ್ಧಾರಕ್ಕೆ ಬಂದಿರಬಹುದೆಂಬ ವಾದವೊಂದು ಅವರ ಆಪ್ತವಲಯದಲ್ಲಿ ಇದೀಗ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ