ಹಿಂದುತ್ವದ ಹೆಸರಲ್ಲಿ ತಾಲಿಬಾನ್ ಆರಂಭಿಸಿದ್ದಾರೆ? ತರೂರ್ ಪ್ರಶ್ನೆ!
Team Udayavani, Jul 18, 2018, 11:07 AM IST
ತಿರುವನಂತಪುರಂ: ಹಿಂದು ಪಾಕಿಸ್ಥಾನ ಎಂಬ ಹೇಳಿಕೆ ನೀಡಿ ಬಿಜೆಪಿಯ ತೀವ್ರ ಪ್ರತಿಭಟನೆ ಎದುರಿಸುತ್ತಿರುವ ಸಂಸದ ಶಶಿ ತರೂರ್ ಮತ್ತೆ ಕಿಡಿ ಕಾರಿದ್ದು, ಅವರೇನು ಹಿಂದುತ್ವದ ಹೆಸರಿನಲ್ಲಿ ತಾಲಿಬಾನ್ ಶುರು ಮಾಡಲು ಉದ್ದೇಶಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ನನ್ನನ್ನು ಪಾಕಿಸ್ಥಾನಕ್ಕೆ ಹೋಗಲಿ ಎನ್ನುತ್ತಿದ್ದಾರೆ. ನಾನು ಅವರಂತೆ ಹಿಂದು ಅಲ್ಲ ಎನ್ನಲು ಅವರು ಯಾರು? ನನಗೆ ನನ್ನ ದೇಶದಲ್ಲಿ ಉಳಿಯಲು ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ತಿರುವನಂತಪುರಂನ ತರೂರ್ ಕಚೇರಿ ಎದುರು ಮಂಗಳವಾರ ನೂರಾರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಕಪ್ಪು ಬಾವುಟಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದರು. ತರೂರ್ ಪಾಕಿಸ್ಥಾನಕ್ಕೆ ತೆರಳಲಿ ಎಂದಿದ್ದರು.
ಕಚೇರಿಯ ಮೇಲೆ ದಾಳಿ ನಡೆಸಿದ್ದ ಬಿಜೆಪಿ ಕಾರ್ಯಕರ್ತರು ಫಲಕಗಳ ಮೇಲೆ ಮಸಿ ಎರಚಿ ಆಕ್ರೋಶ ಹೊರ ಹಾಕಿದ್ದರು.