ವಿವಾದಿತ ಮಾಂಸ ಉದ್ಯಮಿ ಕುರೇಶಿಗೆ ದಿಲ್ಲಿ ಹೈಕೋರ್ಟ್ ನೊಟೀಸ್
Team Udayavani, Feb 11, 2019, 6:50 AM IST
ಹೊಸದಿಲ್ಲಿ : ವಿವಾದಿತ ಮಾಂಸ ರಫ್ತು ಉದ್ಯಮಿ ಮೊಯಿನ್ ಕುರೇಶಿಗೆ ವಿದೇಶ ಪ್ರಯಾಣ ಕೈಗೊಳ್ಳುವುದಕ್ಕೆ ಅನುಮತಿ ನೀಡುವುದಕ್ಕೆ ಆತನ ಭದ್ರತಾ ಮೊತ್ತವನ್ನು ಹೆಚ್ಚಿಸಬೇಕು ಎಂಬ ಸಿಬಿಐ ಕೋರಿಕೆಯನ್ನು ಮನ್ನಿಸಿ ದಿಲ್ಲಿ ಹೈಕೋರ್ಟ್ ಇಂದು ಸೋಮವಾರ ಕುರೇಶಿಗೆ ನೊಟೀಸ್ ಜಾರಿ ಮಾಡಿದೆ.
ವಿದೇಶ ಪ್ರಯಾಣ ಕೈಗೊಳ್ಳುವ ಮೊಯಿನ್ ಕುರೇಶಿಯ ಭದ್ರತಾ ಮೊತ್ತವನ್ನು ಈಗಿನ 2 ಕೋಟಿ ಯಿಂದ 6 ಕೋಟಿ ರೂ.ಗೆ ಏರಿಸಬೇಕು ಎಂದು ಸಿಬಿಐ ನ್ಯಾಯಾಲಯವನ್ನು ಕೋರಿತ್ತು. ಕುರೇಶಿ ಅವರು ಯುಎಇ ಮತ್ತು ಪಾಕಿಸ್ಥಾನಕ್ಕೆ ಪ್ರಯಾಣ ಕೈಗೊಳ್ಳಲು ಅನುಮತಿ ಕೋರಿದ್ದರು. ಇವರ ವಿರುದ್ಧ ಬೃಹತ್ ಹಣ ವಂಚನೆ ಮತ್ತು ಭ್ರಷ್ಟಾಚಾರದ ಕೇಸಿದೆ.
ಯುಎಇಯಲ್ಲಿ ಫೆ.15ರಿಂದ 23ರ ವರೆಗೆ ನಡೆಯಲಿರುವ ಗಲ್ಫ್ ಫುಡ್ ಫೆಸ್ಟಿವಲ್ ಗೆ ಹೋಗಲು ಮತ್ತು ಪಾಕಿಸ್ಥಾನದಲ್ಲಿರುವ ತನ್ನ ಸೋದರ ಸಂಬಂಧಿಯ ಮದುವೆಯಲ್ಲಿ ಭಾಗಿಯಾಗಲು ತನಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಂತೆ ವಿವಾದಿತ ಉದ್ಯಮಿ ಕುರೇಶಿ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ