ಗೋಡ್ಸೆ ಹೇಳಿಕೆ: ಕಮಲ ಹಾಸನ್ಗೆ ಹೈಕೋರ್ಟ್ ತರಾಟೆ, ನಿರೀಕ್ಷಣಾ ಜಾಮೀನು ಮಂಜೂರು
Team Udayavani, May 20, 2019, 5:05 PM IST
ಮಧುರೆ : ‘ಗಾಂಧಿಯನ್ನು ಕೊಂದಿದ್ದ ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ, ರಾಜಕಾರಣಿ ಕಮಲ ಹಾಸನ್ ಗೆ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿರುವ ಮದ್ರಾಸ್ ಹೈಕೋರ್ಟ್, ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕ್ರಿಮಿನಲ್ ವ್ಯಕ್ತಿಯನ್ನು ಧರ್ಮ, ಜಾತಿ ಅಥವಾ ಜನಾಂಗದೊಂದಿಗೆ ಗುರುತಿಸುವುದರಿಂದ ಜನರಲ್ಲಿ ದ್ವೇಷವನ್ನು ಬಿತ್ತಿದಂತಾಗುತ್ತದೆ ಎಂಬ ಎಚ್ಚರಿಕೆಯನ್ನು ಹೈಕೋರ್ಟ್ ಕಮಲ ಹಾಸನ್ ಗೆ ನೀಡಿತು.
‘ದ್ವೇಷದ ಕಿಡಿ ಹೊತ್ತಿಸುವ ಭಾಷಣಗಳನ್ನು ಮಾಡುವುದು ಈಚಿನ ದಿನಗಳಲ್ಲಿ ಒಂದು ಚಾಳಿಯಾಗಿ ಬಿಟ್ಟಿದೆ’ ಎಂದ ಮದ್ರಾಸ್ ಹೈಕೋರ್ಟಿನ ಮಧುರೆ ಪೀಠದ ಜಸ್ಟಿಸ್ ಆರ್ ಪುಗಲೇಂಧಿ ಅವರು, ‘ಬೆಂಕಿಯ ಒಂದು ಕಿಡಿ ದೀಪವನ್ನೂ ಬೆಳಗಬಹುದು, ಅರಣ್ಯವನ್ನೂ ಸುಟ್ಟು ನಾಶಮಾಡಬಹುದು’ ಎಂಬ ಎಚ್ಚರಿಕೆಯ ಮಾತು ಹೇಳಿದರು.
ಅರವಕುರಿಚ್ಚಿಯಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಂಎನ್ಎಂ ಪಕ್ಷದ ಸ್ಥಾಪಕ ಕಮಲ ಹಾಸನ್ ಅವರು, ಗಾಂಧಿಯನ್ನು ಗುಂಡಿಕ್ಕಿ ಕೊಂದಿದ್ದ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದು ಹೇಳಿದ್ದರು. ತನ್ನ ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಕೇಸುಗಳು ದಾಖಲಾದ ಹಿನ್ನೆಲೆಯಲ್ಲಿ ಕಮಲ ಹಾಸನ್ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ್ದರು.
ಹಿಂದೂ ಮುನ್ನಾನಿ ಸಂಘಟನೆ ನೀಡಿದ್ದ ದೂರಿನ ಪ್ರಕಾರ ಕಮಲ ಹಾಸನ್ ವಿರುದ್ಧ ಕೇಸು ದಾಖಲಾಗಿತ್ತು. ಬಿಜೆಪಿ, ಎಐಎಡಿಎಂಕೆ ಮತ್ತು ಇತರ ಅನೇಕ ಹಿಂದೂ ಸಂಘಟನೆಗಳು ಕಮಲ ಹಾಸನ್ ಹೇಳಿಕೆಯನ್ನು ಖಂಡಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್