ಮುಂಬಯಿನಲ್ಲಿ ಭಾರೀ ಅಗ್ನಿ ಅನಾಹುತ
Team Udayavani, Jul 23, 2019, 5:00 AM IST
ಮುಂಬಯಿ: ಮಹಾರಾಷ್ಟ್ರದ ಮಹಾನಗರ ಟೆಲಿಫೋನ್ ನಿಗಮ ನಿಯ ಮಿತದ ಕಟ್ಟಡವೊಂದರಲ್ಲಿ ಸೋಮವಾರ ಅಗ್ನಿ ಅನಾಹುತ ಸಂಭವಿಸಿದ್ದು, 84 ಜನರನ್ನು ರಕ್ಷಿಸಲಾಗಿದೆ. ಒಂಬತ್ತು ಮಹಡಿ ಕಟ್ಟಡ ಇದಾಗಿದ್ದು, ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಂಡುಬಂದಿತ್ತು. ಕ್ರೇನ್ಗಳು ಹಾಗೂ ಏಣಿಗಳನ್ನು ಬಳಸಿ ಉದ್ಯೋಗಿಗಳನ್ನು ರಕ್ಷಿಸಲಾಗಿದೆ. ಘಟನೆ ಯಲ್ಲಿ ಓರ್ವ ಅಗ್ನಿಶಾಮಕ ಸಿಬಂದಿಗೆ ಗಾಯ ವಾಗಿದೆ. 14 ಅಗ್ನಿ ಶಾಮಕ ವಾಹನಗಳು ಹಾಗೂ ಇತರ ಸಲಕರಣೆಗಳು, ಒಂದು ರೋಬೋಟ್ಅನ್ನು ಅಗ್ನಿ ಶಮನ ಕಾರ್ಯಾ ಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಒಟ್ಟು 175 ಸಿಬಂದಿ ಕಾರ್ಯನಿರತರಾಗಿದ್ದರು.
ಕ್ರೇನ್ನಲ್ಲಿ ಐದರಿಂದ ಆರು ಜನರಂತೆ ತಂಡ ತಂಡವಾಗಿ ಸಿಬಂದಿಯನ್ನು ಕೆಳಕ್ಕೆ ಇಳಿಸಲಾಗಿದೆ. ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ಸಿಲುಕಿಕೊಂಡ ಸಿಬಂದಿ ಸಹಾಯಕ್ಕಾಗಿ ಕಿರುಚುತ್ತಿದ್ದುದು ಕೇಳಿ ಬಂದಿತ್ತು. ಸುಮಾರು 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸಂಜೆ ಆರು ಗಂಟೆಯ ಹೊತ್ತಿಗೆ ಅಗ್ನಿ ಶಮನ ಮಾಡಲಾಗಿದೆ ಮತ್ತು ಎಲ್ಲ ಸಿಬಂದಿಯನ್ನು ರಕ್ಷಿಸಲಾಗಿದೆ.