ಉಗ್ರರಿಗೆ ನೆರವು: ಪಾಕ್ ಕಪ್ಪು ಪಟ್ಟಿಗೆ?
40 ನಿಯಮಗಳಲ್ಲಿ ಒಂದರಲ್ಲಿ ಮಾತ್ರ ಪಾಸ್ ಆದ ಪಾಕ್
Team Udayavani, Oct 9, 2019, 5:45 AM IST
ಇಸ್ಲಾಮಾಬಾದ್: ಉಗ್ರ ನಿಗ್ರಹಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೊರ ಪ್ರಪಂಚದೆದುರು ಬಡ ಬಡಾಯಿಸುತ್ತಾ, ಒಳಗೊಳಗೇ ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿರುವ ಪಾಕಿಸ್ಥಾನವು ಈ ಬಾರಿಯೂ ಹಣಕಾಸು ಕಾರ್ಯ ಚಟುವಟಿಕೆ ನಿಯಂತ್ರಣ ಕಾರ್ಯಪಡೆ(ಎಫ್ಎಟಿಎಫ್)ಯ ಕಪ್ಪು ಪಟ್ಟಿಗೆ ಸೇರುವ ಅಥವಾ ಗ್ರೇ ಲಿಸ್ಟ್ (ಬೂದು ಬಣ್ಣದ ಪಟ್ಟಿ)ನಲ್ಲಿಯೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಕಾರ್ಯಪಡೆ ಸೂಚಿಸಿರುವ 40 ನಿಯಮಗಳಲ್ಲಿ ಪಾಕಿಸ್ಥಾನ ಕಾರ್ಯಗತಗೊಳಿಸಿದ್ದು ಕೇವಲ ಒಂದು ನಿಯಮವನ್ನು ಮಾತ್ರ! ಹೀಗಾಗಿ ನಿಯಮದಂತೆ ಪಾಕಿಸ್ಥಾನವನ್ನು ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರಿಸಬೇಕು. ಆದರೆ ಪಾಕ್ ಸರಕಾರವು ಈಗಾಗಲೇ ಮಿತ್ರರಾಷ್ಟ್ರಗಳಾದ ಚೀನ, ಮಲೇಷ್ಯಾ ಮತ್ತು ಟರ್ಕಿಯೊಂದಿಗೆ ಮಾತುಕತೆ ನಡೆಸಿ ಕಪ್ಪು ಪಟ್ಟಿಗೆ ಸೇರಿಸದಂತೆ ಲಾಬಿ ಮಾಡಿದೆ. ಅಲ್ಲದೆ, ಎಫ್ಎಟಿಎಫ್ಗೆ ಈಗ ಚೀನದ ಕ್ಸಿಯಾನ್ಜಿಮ್ ಲಿಯು ಅವರೇ ಅಧ್ಯಕ್ಷರಾಗಿರುವ ಕಾರಣ ಅವರು ಪಾಕ್ ಪರ ಮೃದು ಧೋರಣೆ ತೋರುವ ಸಾಧ್ಯತೆ ಇದೆ.
ನಿಯಮಗಳ ಪಾಲನೆಯೇ ಇಲ್ಲ
ಉಗ್ರ ನಿಗ್ರಹಗಳಿಗೆ ಸಂಬಂಧಿಸಿ ಪಾಕ್ಗೆ ಹಲವು ಕಠಿನ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿತ್ತು. ಆದರೆ ಪಾಕ್ ಹೆಚ್ಚಿನದನ್ನು ಪಾಲಿಸಿಲ್ಲ.
ನಿಲುವು ಬದಲಿಸಿದ ಚೀನ!
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಗೊಳಿಸಿದ ಭಾರತದ ನಿಲುವನ್ನು ವಿಶ್ವಸಂಸ್ಥೆಯ ವೇದಿಕೆ ಯಲ್ಲಿ ಪ್ರಸ್ತಾವಿಸಲು ಪಾಕ್ಗೆ ರಾಜಕೀಯ ನೆರವನ್ನು ಪರೋಕ್ಷ ವಾಗಿ ನೀಡಿದ್ದ ಚೀನ, ಈಗ ಆ ವಿಚಾರದಲ್ಲಿ ಉಲ್ಟಾ ಹೊಡೆದಿದೆ. ಈ ವಿಚಾರವನ್ನು ಭಾರತ ಮತ್ತು ಪಾಕ್ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದಿದೆ. ಈ ವಾರ ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಮೋದಿ ಭೇಟಿ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ