ಹೈಕೋರ್ಟ್ ಎಂಜಿನಿಯರ್ನಂತೆ ವರ್ತಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
Team Udayavani, Nov 28, 2022, 10:30 PM IST
ನವದೆಹಲಿ: ಆಂಧ್ರ ಪ್ರದೇಶ ಹೈಕೋರ್ಟ್ ನಗರ ವಿನ್ಯಾಸಕಾರ ಅಥವಾ ಎಂಜಿನಿಯರ್ನಂತೆ ವರ್ತಿಸಲು ಸಾಧ್ಯವಿಲ್ಲ. ಆರು ತಿಂಗಳೊಳಗೆ ರಾಜಧಾನಿ ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಮಾಡಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜಧಾನಿಯನ್ನು ಸ್ಥಳಾಂತರಿಸುವ, ವಿಭಜಿಸುವ ಅಥವಾ ತ್ರಿವಿಭಜಿಸುವ ಯಾವುದೇ ಸೂಕ್ತ ಕಾನೂನನ್ನು ರೂಪಿಸಲು ಆಂಧ್ರ ಪ್ರದೇಶ ರಾಜ್ಯ ಶಾಸಕಾಂಗ ಸಮರ್ಥವಾಗಿಲ್ಲ ಎಂದು ಹೇಳಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಮಾಡಿರುವ ಮನವಿಗೆ ಸಂಬಂಧಿಸಿದಂತೆ ರೈತರು, ರೈತ ಸಂಘಗಳು ಮತ್ತು ಕೇಂದ್ರದಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ.
ನ್ಯಾ. ಕೆ.ಎಂ.ಜೋಸೆಫ್ ಮತ್ತು ನ್ಯಾ. ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಜ.31ಕ್ಕೆ ಮುಂದೂಡಿತು.