ಹೆದ್ದಾರಿ ಗುಣಮಟ್ಟ: ವೈಫಲ್ಯಕ್ಕೆ ಇನ್ನು ಅಧಿಕಾರಿಗಳೂ ಹೊಣೆ
Team Udayavani, Jun 25, 2021, 7:50 AM IST
ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿ ಗಳು ಮತ್ತು ಅವುಗಳಲ್ಲಿ ಸೇತುವೆಗಳಂತಹ ರಚನೆ ಗಳನ್ನು ನಿರ್ಮಿಸುವಾಗ ಗುಣಮಟ್ಟದ ಜತೆಗೆ ರಾಜಿಯಾಗಿ ರುವುದು ಕಂಡು ಬಂದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ಅಧಿಕಾರಿಗಳು ಮತ್ತು ಎಂಜಿನಿಯರ್ಗಳು, ರಸ್ತೆ ಸಾರಿಗೆ ಸಚಿವಾಲಯ ಮತ್ತಿತರ ಏಜೆನ್ಸಿ ಗಳನ್ನು ಉತ್ತರದಾಯಿಗಳನ್ನಾಗಿಸುವ ವ್ಯವಸ್ಥೆ ಸದ್ಯವೇ ಜಾರಿಗೆ ಬರಲಿದೆ.
ನಿರ್ಮಾಣ ಸಂದರ್ಭ ಗುಣ ಮಟ್ಟವನ್ನು ಅನುಸರಿಸು ವಲ್ಲಿ ವೈಫಲ್ಯ ಕಂಡು ಬಂದರೆ ಅಧಿಕಾರಿ ಗಳಿಗೆ ಪ್ರಕರಣದ ಗುರುತ್ವಕ್ಕೆ ಅನುಸಾರ ದಂಡ ವಿಧಿಸಲಾಗುತ್ತದೆ. ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ನಿರ್ಮಾಣ ಕಾರ್ಯ ನಡೆಯುತ್ತಿರುವ ಸ್ಥಳದ ಇನ್ಚಾರ್ಜ್ ಅಧಿಕಾರಿಗಳು ಪ್ರಮಾಣೀಕೃತ ವಿಧಾನವೇ ಅನುಸರಣೆ ಆಗುತ್ತಿದೆ ಎಂಬುದರ ತಪಾಸಣೆ ನಡೆಸುವ ಸಂಬಂಧ ಹೊಣೆಗಾರಿಕೆಗಳನ್ನು ವಿಧಿಸಿದೆ. ಗುಣಮಟ್ಟ ನಿಯಂತ್ರಣಕ್ಕಾಗಿ ಸಂಬಂಧಿತ ಅಧಿಕಾರಿಗಳು ಪ್ರತೀ ತಿಂಗಳು ನಿರ್ಮಾಣ ಕಾರ್ಯದ ತಪಾಸಣೆ ನಡೆಸಬೇಕಿದೆ. 300 ಕೋ.ರೂ.ಗಳಿಗಿಂತ ಹೆಚ್ಚು ಮೊತ್ತದ ಯೋಜನೆ ಮತ್ತು 60 ಮೀ.ಗಳಿಗಿಂತ ಹೆಚ್ಚು ಉದ್ದದ ಸೇತುವೆ ಒಳಗೊಂಡಿರುವ ಯೋಜನೆಯಾದರೆ ತಿಂಗಳಿಗೆ 2 ಬಾರಿ ಪರೀಕ್ಷೆ ನಡೆಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…