ಉಗ್ರರಿಗೆ ನೆರವು; ಸರ್ಕಾರಿ ಕೆಲಸದಿಂದ ಉಗ್ರ ಸೈಯದ್ ಪುತ್ರ ಅಮಾನತು!
Team Udayavani, Nov 3, 2017, 12:24 PM IST
ಶ್ರೀನಗರ್: ಹಿಜ್ಬುಲ್ ಮುಜಾಹಿದೀನ್ ಉಗ್ರ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪುತ್ರ ಸೈಯದ್ ಶಾಹಿದ್ ಯೂಸೂಫ್ ನನ್ನು ಜಮ್ಮು ಕಾಶ್ಮೀರ ಸರ್ಕಾರ ಗುರುವಾರ ಕೃಷಿ ಇಲಾಖೆ ಕೆಲಸದಿಂದ ಅಮಾನತು ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಉಗ್ರರಿಗೆ ಹಣ ದೇಣಿಗೆ ಸಂಗ್ರಹ ವಿಷಯಕ್ಕೆ ಸಂಬಂಧಿಸಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ ಮಗ ಶಾಹೀದ್ ಯೂಸುಫ್ನನ್ನು ರಾಷ್ಟ್ರೀಯ ತನಿಖಾ ದಳ ಕಳೆದ ತಿಂಗಳು ಬಂಧಿಸಿತ್ತು.
ಯೂಸೂಫ್ ಹಣವನ್ನು ಪಡೆದಿರುವುದು ಪತ್ತೆಯಾಗಿತ್ತು, ಅಲ್ಲದೇ ಅಂತಾರಾಷ್ಟ್ರೀಯ ಹವಾಲಾ ಜಾಲದ ಮೂಲಕ ಹಣವನ್ನು ಸಂಗ್ರಹಿಸಿ, ಆ ಹಣವನ್ನು ಸೌದಿ ಅರೇಬಿಯಾ ಮೂಲದ ಹಿಜ್ಬುಲ್ ಮುಜಾಹಿದೀನ್ ಸದಸ್ಯ ಐಜಾಜ್ ಅಹ್ಮದ್ ಭಟ್ ಗೆ ಹಣವನ್ನು ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಬಟ್ ಹಣಕಾಸು ನೆರವು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಉಗ್ರ ಬಟ್ ಭಾರತದ ವಾಂಟೆಡ್ ಲಿಸ್ಟ್ ನಲ್ಲಿದ್ದಾನೆ.