ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾದ ಅಮಿತ್ ಶಾ
Team Udayavani, Jul 29, 2022, 8:31 PM IST
ನವದೆಹಲಿ: ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಚಿವೆ ಸ್ಮತಿ ಇರಾನಿ ಶುಕ್ರವಾರ ಭೇಟಿಯಾಗಿದ್ದಾರೆ.
ಇದೊಂದು ಸೌಹಾರ್ದಯುತ ಭೇಟಿಯಾಗಿತ್ತೆಂದು ಹೇಳಲಾಗಿದೆ. ಗುರುವಾರ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹಾಗೂ ಇಲಾಖೆಯ ಸಹಾಯಕ ಸಚಿವರಾಗಿರುವ ಎಸ್.ಪಿ.ಸಿಂಗ್ ಬಗೇಲ್ ಅವರು ರಾಷ್ಟ್ರಪತಿ ಅವರನ್ನು ಭೇಟಿಯಾಗಿದ್ದರು.
ಬುಧವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಲಾಖೆಯ ಸಹಾಯಕ ಸಚಿವರುಗಳಾದ ಪಂಕಜ್ ಚೌಧರಿ ಮತ್ತು ಡಾ.ಭಾಗವತ್ ಕಿಶನ್ರಾವ್ ಅವರು ರಾಷ್ಟ್ರಪತಿ ಅವರನ್ನು ಭೇಟಿಯಾಗಿದ್ದರು.