4 ಕೋಟಿ ವಿಮಾ ಹಣಕ್ಕಾಗಿ ಕೊಲೆ ಮಾಡಿ ತನ್ನ ನಕಲಿ ಸಾವಿನ ಕಥೆ ಕಟ್ಟಿದ


Team Udayavani, Jun 30, 2017, 11:20 AM IST

Wagha Naishik-700.jpg

ನಾಶಿಕ್‌ : ಕೇಳಲು ಇದೊಂದು ಬಾಲಿವುಡ್‌ ಸಿನೆಮಾ ಕಥೆಯ ಹಾಗಿದೆ; ಆದರೂ ಇದು ಸತ್ಯ ಘಟನೆಯೇ ಆಗಿದೆ.  ರಾಮದಾಸ್‌ ವಾಘಾ ಎಂಬ

ನಾಶಿಕ್‌ : ಕೇಳಲು ಇದೊಂದು ಬಾಲಿವುಡ್‌ ಸಿನೆಮಾ ಕಥೆಯ ಹಾಗಿದೆ; ಆದರೂ ಇದು ಸತ್ಯ ಘಟನೆಯೇ ಆಗಿದೆ. ರಾಮದಾಸ್‌ ವಾಘಾ ಎಂಬ  ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ತಾನೇ ಮುಖ್ಯ ಪಾತ್ರದಲ್ಲಿದ್ದು ಕೊಂಡು ಇತರ ಮೂವರು ಸ್ನೇಹಿತರ ನೆರವಿನಲ್ಲಿ, ತನ್ನ ನಾಲ್ಕು ಕೋಟಿ ರೂ. ವಿಮಾ ಮೊತ್ತವನ್ನು ಪಡೆಯಲು ನಡೆಸಿದ ರೋಚಕ ಸತ್ಯ ಘಟನೆ ಇದಾಗಿದೆ.

ರಾಮದಾಸ್‌ ವಾಘಾ ರಸ್ತೆ ಅಪಘಾತದಲ್ಲಿ ಸತ್ತರೆಂದು ತೋರಿಸುವುದು ಮತ್ತು ಆ ಮೂಲಕ ಅವರಿಗೆ ಮೂರು ಬೇರೆ ಬೇರೆ ವಿಮಾ ಕಂಪೆನಿಗಳಲ್ಲಿರುವ ಪಾಲಿಸಿಗಳ ಮೂಲಕ ನಾಲ್ಕು ಕೋಟಿ ರೂ. ಹಣ ಪಡೆಯುವುದು ಈ ಕಥೆಯ ಮೂಲ ಹಂದರ. 

ಇದಕ್ಕಾಗಿ ವಾಘಾ ಮತ್ತು ಆತನ ಮೂವರು ಸ್ನೇಹಿತರು (ಇವರಲ್ಲಿ ಒಬ್ಟಾತ ಹೊಟೇಲು ಉದ್ಯಮಿ) ಹೊಟೇಲಿನ ವೇಟರ್‌ ಒಬ್ಬನನ್ನು ಕತ್ತು ಹಿಸುಕಿ, ಉಸಿರು ಗಟ್ಟಿಸಿ ಸಾಯಿಸಿದರು. ಬಳಿಕ ಆತನ ಮುಖದ ಗುರುತು ಹತ್ತದ ರೀತಿಯಲ್ಲಿ ಆತನ ಮೇಲೆ ವಾಹನವೊಂದನ್ನು ಹರಿಸಿದರು. ಹೀಗೆ ರಸ್ತೆ ಅಪಘಾತದಲ್ಲಿ  ಸತ್ತ ವ್ಯಕ್ತಿ ರಾಮದಾಸ್‌ ವಾಘಾ ಎಂದು ತೋರಿಸಲು ವೇಟರ್‌ನ ಶವದ ಅಂಗಿಯ ಕಿಸೆಯಲ್ಲಿ ವಾಘಾನ ಎಟಿಎಂ ಕಾರ್ಡ್‌ ಮತ್ತೆ ಇಲೆಕ್ಟ್ರಿಸಿಟಿ ಬಿಲ್‌ ಇಟ್ಟರು. 

ಜೂನ್‌ 9ರಂದು ನಾಶಿಕ್‌ನ ತ್ರ್ಯಂಬಕೇಶ್ವರ ದೇವಸ್ಥಾನದ ಬಳಿಯಲ್ಲಿ  ನಡೆಯಿತೆನ್ನಲಾದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ಶವವನ್ನು ಪೊಲೀಸರು, ಕೇಸು ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಶವದ ಕಿಸೆಯಲ್ಲಿ  ದೊರೆತ ಎಟಿಎಂ ಕಾರ್ಡ್‌, ಇಲೆಕ್ಟ್ರಿಸಿಟಿ ಬಿಲ್‌ ಆಧಾರದಲ್ಲಿ ರಾಮದಾಸ್‌ ವಾಘಾ ಅವರ ಕುಟುಂಬದವರು ಮತ್ತು ಸ್ನೇಹಿತರನ್ನು ಕಾಣಲು ಹೋದ ಪೊಲೀಸರಿಗೆ “ವಾಘಾ ಸತ್ತಿಲ್ಲ, ಜೀವಂತ ಇದ್ದಾರೆ’ ಎಂಬ ಮಾಹಿತಿ ದೊರಕಿ ಅಚ್ಚರಿ ಉಂಟಾಯಿತು. 

ಇತ್ತ ಶವದ ಪೋಸ್ಟ್‌ ಮಾರ್ಟಂ ವರದಿ ಕೈಸೇರಿದ ಪೊಲೀಸರಿಗೆ, “ಅಪರಿಚಿತ ವ್ಯಕ್ತಿಯ ಸಾವು ರಸ್ತೆ ಅಪಘಾತದಿಂದ ಆಗಿಲ್ಲ; ಉಸಿರು ಗಟ್ಟಿ ಸಾಯಿಸಿರುವುದರಿಂದ ಆಗಿದೆ’ ಎಂದು ತಿಳಿಯಿತು. 

ಒಡನೆಯೇ ಪೊಲೀಸರು ರಾಮದಾಸ್‌ ವಾಘಾನನ್ನು ಬಂಧಿಸಲು ಮುಂದಾದರು. ಆದರೆ ತನ್ನ ಸಿನಿಮೀಯ ಕೃತ್ಯ ಪೊಲೀಸರಿಗೆ ತಿಳಿಯಿತೆಂಬುದನ್ನು ಅರಿತ ವಾಘಾ ನಾಪತ್ತೆಯಾದ. ಆದರೆ ಪೊಲೀಸರು ಕೊಲೆ ಕೃತ್ಯದಲ್ಲಿ ಶಾಮೀಲಾದ ಆತನ ಮೂವರು ಸಹಚರರನ್ನು ಬಂಧಿಸಿದರು. ಕೊಲೆ ಕೃತ್ಯಕ್ಕೆ ಬಳಸಲಾದ ಮಾರುತಿ 800 ಕಾರನ್ನು ಕೂಡ ಅವರಿಂದ ವಶಪಡಿಸಿಕೊಂಡರು. 

ವಾಘಾ ಮತ್ತು ಆತನ ಸಹಚರರಿಂದ ಕೊಲೆಗೀಡಾದ 45ರ ಹರೆಯದ ಹೊಟೇಲ್‌ ವೇಟರ್‌, ತಮಿಳುನಾಡು ಅಥವಾ ಆಂಧ್ರ ಪ್ರದೇಶದವನಾಗಿದ್ದು ಆತನ ಹೆಸರು ಮುಬಾರಕ್‌ ಚಾಂದ್‌ ಪಾಶಾ ಎಂದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರಿಗೆ ಮುಖ್ಯ ಕೊಲೆ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿರುವ ರಾಮದಾಸ್‌ ವಾಘಾ ನಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

ಟಾಪ್ ನ್ಯೂಸ್

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಯ ಸ್ಥಿತಿ ಹೇಗಾಗಿದೆ ನೋಡಿ…

Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.