ಬಾಲಾಕೋಟ್ ವಾಯುದಾಳಿಗೆ ನೆರವಾಗಿದ್ದು ಅಫ್ಘಾನ್ ಗುಪ್ತಚರ ಮಾಹಿತಿ!


Team Udayavani, Feb 26, 2020, 7:30 PM IST

Balakot-Air-Strike

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನವದೆಹಲಿ: ಪಾಕಿಸ್ಥಾನ ಪ್ರಾಯೋಜಿತ ಜೈಶ್ ಉಗ್ರರು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರಿದ್ದ ಸೇನಾ ವಾಹನವನ್ನು ಸ್ಪೋಟಿಸಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಪಾಕಿಸ್ಥಾನ ಭೂಭಾಗದೊಳಗೆ ನುಗ್ಗಿ ಉಗ್ರ ತರಬೇತಿ ಶಿಬಿರಗಳನ್ನು ನಾಶಪಡಿಸಿದ ಬಾಲಾಕೋಟ್ ವಾಯುದಾಳಿಗೆ ಇಂದಿಗೆ ಒಂದು ವರ್ಷ ಪೂರ್ತಿಯಾಗಿದೆ.

ಪುಲ್ವಾಮ ಉಗ್ರ ದಾಳಿಯ ಬಳಿಕ ಪಾಕ್ ಸೇನೆಯು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇದ್ದ ಉಗ್ರಗಾಮಿ ಶಿಬಿರಗಳನ್ನು ತೆರವುಗೊಳಿಸಿತ್ತು. ಪುಲ್ವಾಮ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಎಲ್.ಒ.ಸಿ. ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವ ಆತಂಕ ಪಾಕಿಸ್ಥಾನದ್ದಾಗಿತ್ತು.

ಈ ಕಾರಣಕ್ಕಾಗಿ ಇಲ್ಲಿದ್ದ ಉಗ್ರರನ್ನು ಪಾಕಿಸ್ಥಾನ ಅಫ್ಗಾನಿಸ್ಥಾನ ಗಡಿ ಭಾಗದಲ್ಲಿದ್ದ ಬೆಟ್ಟ ಗುಡ್ಡಗಳಿಂದ ಆವೃತ ದುರ್ಗಮ ಬಾಲಾಕೋಟ್ ಪ್ರದೇಶಕ್ಕೆ ರವಾನಿಸಿತ್ತು. ಭಾರತೀಯ ಸೇನೆಯು ತನ್ನ ನೆಲದೊಳಕ್ಕೆ ಅಷ್ಟು ದೂರ ನುಗ್ಗಿ ಬಂದು ದಾಳಿ ನಡೆಸಲಾರದು ಎಂಬ ಯೋಚನೆ ಪಾಕಿಸ್ಥಾನದ್ದಾಗಿತ್ತು.

ಆದರೆ ಪಾಕ್ ನ ಈ ಯೋಚನೆ ತಲೆಕೆಳಗಾಗಿದ್ದೇ ಫೆಬ್ರವರಿ 26ರ ಬೆಳ್ಳಂಬೆಳಿಗ್ಗೆ ಭಾರತೀಯ ವಾಯುಪಡೆಯ ಮಿರಾಜ್ ಯುದ್ಧ ವಿಮಾನಗಳು ಖೈಬರ್ ಪಖ್ಟ್ತುಂಖ್ವಾ ಪ್ರದೇಶದಲ್ಲಿದ್ದ ಬಾಲಾಕೋಟ್ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಉಗ್ರಗಾಮಿ ತರಬೇತು ಶಿಬಿರದ ಮೇಲೆ ಬಾಂಬ್ ಗಳನ್ನು ಸುರಿಸಿ ಯಶಸ್ವಿಯಾಗಿ ತಮ್ಮ ನೆಲೆಯನ್ನು ಸೇರಿಕೊಂಡಾಗ ಪಾಕಿಸ್ಥಾನ ಸಹಿತ ವಿಶ್ವವೇ ಒಮ್ಮ ಬೆಚ್ಚಿಬಿದ್ದಿತ್ತು.

ಆದರೆ ಒಟ್ಟು ಬಾಲಾಕೋಟ್ ದಾಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಗುಪ್ತಚರ ಮಾಹಿತಿಗಳು. ಎಲ್.ಒ.ಸಿ ಭಾಗದಿಂದ ಕಾಲ್ಕಿತ್ತಿದ್ದ ಉಗ್ರರನ್ನು ಪಾಕಿಸ್ಥಾನ ನೇರವಾಗಿ ಸಾಗಿಸಿದ್ದೇ ಈ ಬಾಲಾಕೋಟ್ ಉಗ್ರ ಶಿಬಿರಗಳಿಗೆ. ಇಲ್ಲಿನ ಉಗ್ರ ಶಿಬಿರಗಳಿಗೆ ಹೊಸ ಉಗ್ರರು ಬರುತ್ತಿದ್ದಾರೆ ಎಂಬ ಅಮೂಲ್ಯ ಮಾಹಿತಿಯನ್ನು ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ನೀಡಿದ್ದು ಬೇರಾರು ಅಲ್ಲ, ಬದಲಾಗಿ ಅ‍ಫ್ಘಾನಿಸ್ಥಾನ ಗುಪ್ತಚರ ಜಾಲಗಳಿಂದಲೇ ಈ ಮಹತ್ವದ ಮಾಹಿತಿ ಭಾರತಕ್ಕೆ ಲಭ್ಯವಾಗಿದ್ದು.

ಅಫ್ಘಾನಿಸ್ಥಾನದಲ್ಲಿನ ಗುಪ್ತಚರ ಜಾಲಗಳು ಭಾರತದ ತಾಂತ್ರಿಕ ಗುಪ್ತಚರ ದಳ, ರಾಷ್ಟ್ರೀಯ ತಾಂತ್ರಿಕ ಸಂಸೋಧನಾ ಸಂಸ್ಥೆಗಳಿಗೆ ನೀಡಿದ ಈ ಪ್ರಾಥಮಿಕ ಮಾಹಿತಿಗಳನ್ನು ಆಧರಿಸಿ ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ಈ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಕಣ್ಗಾವಲು ಇರಿಸಿದ ಬಳಿಕ ಅಲ್ಲಿ ಲಭಿಸಿದ ಮಾಹಿತಿಗಳನ್ನು ಆಧರಿಸಿ ಈ ವಾಯುದಾಳಿಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಪಾಕಿಸ್ಥಾನದ ಖೈಬರ್ ಪಖ್ಟ್ತುಂಖ್ವಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಅಫ್ಘಾನ್ ಗುಪ್ತಚರ ಇಲಾಖೆಯ ಮಾನವ ಸಂಪನ್ಮೂಲಗಳಿಂದ ಪ್ರಾಥಮಿಕ ಮಾಹಿತಿಗಳು ನಮ್ಮ ಗುಪ್ತಚರ ಸಂಸ್ಥೆಗಳಿಗೆ ಲಭಿಸಿವೆ.

ಈ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ಒಂದು ಸಮಗ್ರ ದಾಳಿ ಯೋಜನೆಯನ್ನು ರೂಪಿಸಿದ ಬಳಿಕ ಭಾರತೀಯ ವಾಯುಪಡೆಯು ಬಾಲಾಕೋಟ್ ದಾಳಿಯ ರೂಪುರೇಷೆಗಳನ್ನು ಪಕ್ಕಾ ಮಾಡಿಕೊಂಡಿದೆ. ಆ ಬಳಿಕ ಯೋಜನೆಯ ಪ್ರಕಾರವೇ 2019ರ ಫೆಬ್ರವರಿ 26ರ ಬೆಳ್ಳಂಬೆಳಿಗ್ಗೆ ಒಟ್ಟು 16 ಯುದ್ಧ ವಿಮಾನಗಳ ಪೈಕಿ ಸ್ಪೈಸ್ 2000 ಮತ್ತು ಕ್ರಿಸ್ಟಲ್ ಮೇಝ್ ಕ್ಷಿಪಣಿಗಳನ್ನು ಹೊತ್ತಿದ್ದ ತಲಾ 6 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿ ಸುರಕ್ಷಿತವಾಗಿ ವಾಪಾಸಾಗಿದ್ದವು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.