ಚಳಿ, ಗಾಳಿಯ ಹೇಗೆ ಎದುರಿಸುತ್ತದೆ ಸೇನೆ?
Team Udayavani, Dec 3, 2020, 6:25 AM IST
ಚೀನದೊಂದಿಗೆ ಬಿಕ್ಕಟ್ಟು ಮುಂದುವರಿದಿರುವ ಕಾರಣ ಭಾರತೀಯ ಸೇನೆಯು ಸುಮಾರು 50 ಸಾವಿರ ಯೋಧರನ್ನು ಎಲ್ಎಸಿಯ ಎತ್ತರದ ಪ್ರದೇಶದಲ್ಲಿ ನಿಯೋಜಿಸುತ್ತಿದೆ. ಡಿಸೆಂಬರ್ ತಿಂಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಪ್ರದೇಶಗಳಲ್ಲಿ ತಾಪಮಾನ -15ರಿಂದ 3 ಡಿಗ್ರಿಯಷ್ಟಿರುತ್ತದೆ ಜನವರಿಯಲ್ಲಂತೂ -40 ಡಿಗ್ರಿ ಸೆಲ್ಸಿಯಸ್ ತಲುಪುವುದೂ ಉಂಟು. ಈ ಸವಾಲನ್ನು ಸೇನೆ ಹೇಗೆ ಎದುರಿಸುತ್ತದೆ ಎನ್ನುವ ಮಾಹಿತಿ ಇಲ್ಲಿದೆ…
ಮೂರು ರೀತಿಯ ಸವಾಲು
1962ರಲ್ಲಿ ಪ್ರಕಟವಾದ ಹಿಸ್ಟರಿ ಆಫ್ ದ ಕಾನ್ಫ್ಲಿಕ್ಟ್ ವಿತ್ ಚೀನ ಪುಸ್ತಕವು, ಲಡಾಖ್ನಲ್ಲಿ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಬಣ್ಣಿಸುತ್ತದೆ: “”ಮಧ್ಯಾಹ್ನದ ವೇಳೆಗೆ ಜೋರಾಗಿ ಶೀತಗಾಳಿ ಬೀಸಲಾರಂಭಿಸಿ ಮರುದಿನ ಬೆಳಗ್ಗೆಯವರೆಗೂ ಮುಂದುವರಿಯುತ್ತದೆ.
ಎಷ್ಟು ಚಳಿ ಇರುತ್ತದೆಂದರೆ ಬರಿಗೈಯಿಂದ ಲೋಹವನ್ನು ಮುಟ್ಟಿದರೂ ಅಪಾಯ ಎದುರಾಗುತ್ತದೆ. ಬಿಸಿಯಿಂದ ಗಾಯ ಹೇಗಾಗುತ್ತದೋ, ಚಳಿಯಿಂದಲೂ ಅಷ್ಟೇ ಗಾಯವಾಗಬಲ್ಲದು” ಎನ್ನುತ್ತದೆ ಆ ಪುಸ್ತಕ. ಈ ವಿಚಾರವಾಗಿ ನಿವೃತ್ತ ಮೇಜರ್ ಜನರಲ್ ಎ.ಪಿ ಸಿಂಗ್ ಹೇಳುವುದು ಹೀಗೆ: “”ಆ ಎತ್ತರದ ಪ್ರದೇಶಗಳಲ್ಲಿ ಯೋಧರು ಮೂರು ರೀತಿಯ ಸವಾಲು ಎದುರಿಸುತ್ತಾರೆ. ಒಂದು ಅತ್ಯಂತ ಚಳಿ ಹಾಗೂ ವೇಗದ ಗಾಳಿಯಿಂದ. ಎರಡನೆಯದು ಆಮ್ಲಜನಕದ ಕೊರತೆಯಿಂದ ಹಾಗೂ ಮೂರನೆಯದು ಶತ್ರುಗಳಿಂದ”
ಸೂಕ್ತ ತಯಾರಿ
ಎತ್ತರದ ಶೀತಲ ಪ್ರದೇಶಗಳಿಗೆ ನಿಯೋಜಿತವಾಗುವ ಸೈನಿಕರು ಆಮ್ಲಜನಕ, ಚಳಿ, ಗಾಳಿಯ ಸವಾಲಿನ ನಡುವೆಯೇ ಏನಿಲ್ಲವೆಂದರೂ 20-45 ಕೆ.ಜಿ ಭಾರವನ್ನು ಹೊತ್ತು ಸಾಗುತ್ತಾರೆ. ಆ ಕಾರಣಕ್ಕಾಗಿ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಲೇಹ್ ಹಾಗೂ ಮುಖ್ಪರಿಯಂಥ ಅತಿ ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಮಟ್ಟ 25ರಿಂದ 65 ಪ್ರತಿಶತ ಕಡಿಮೆ ಇರುತ್ತದೆ. ಇದನ್ನು ಎದುರಿಸಲು ಸೈನಿಕರಿಗೆ ಮೂರು ಹಂತದ ತರಬೇತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಆರು ದಿನಗಳವರೆಗೆ 9000-12000 ಅಡಿ ಎತ್ತರದ ಪ್ರದೇಶಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಸೈನಿಕರು ಎರಡು ದಿನಗಳ ವಿಶ್ರಾಂತಿಯ ಅನಂತರ, ನಾಲ್ಕು ದಿನಗಳವರೆಗೆ ಚಿಕ್ಕ ಭಾರಹೊತ್ತು ನಡೆಯುವುದು ಹಾಗೂ ಬೆಟ್ಟಗಳನ್ನು ಏರವುದು ಮಾಡುತ್ತಾರೆ. ಎರಡನೇ ಹಂತದ ತರಬೇತಿ 4 ದಿನಗಳವರೆಗೆ 15 ಸಾವಿರ ಅಡಿ ಎತ್ತರದಲ್ಲಿ ನಡೆಯುತ್ತದೆ. ಆಗಲೂ ನಡಿಗೆ, ಭಾರ ಹೊರುವುದು, ಬಂಡೆಗಲ್ಲುಗಳನ್ನು ಏರುವ ತರಬೇತಿ ನೀಡಲಾಗುತ್ತದೆ. ಇವರೆಲ್ಲರ ಜತೆಗೆ ಸಿಯಾಚಿನ್ನಂಥ ಪ್ರದೇಶ ಹಾಗೂ ಲಡಾಖ್ನಲ್ಲಿ ವರ್ಷಗಳಿಂದ ಚಳಿಗಾಲದ ಸಂದರ್ಭ ಕಾವಲು ಕಾಯುವ ವಿಶೇಷ ತರಬೇತಿ ಹೊಂದಿರುವ ಪಡೆಗಳೂ ಇರುತ್ತವೆ.
ಸುರಕ್ಷತ ಪರಿಕರಗಳು
ಚಳಿಯಿಂದ ರಕ್ಷಣೆ ನೀಡುವುದಕ್ಕಾಗಿ ಸೂಕ್ತ ಬಟ್ಟೆಗಳು, ಬಹುಲೇಯರ್ಗಳ ಜಾಕೆಟ್, ಮುಖಗವಸು, ಹೆಲ್ಮೆಟ್ ಮತ್ತು ವಿಶೇಷ ಕನ್ನಡಕ ನೀಡಲಾಗುತ್ತದೆ. ಇನ್ನು ಅವರ ಬಳಿ ಇರುವ ಸಸ್ಟೇನೆನ್ಸ್ ಕಿಟ್ನಲ್ಲಿ ಸ್ಲಿàಪಿಂಗ್ ಬ್ಯಾಗ್, ಹೆಚ್ಚುವರಿ ಸಾಕ್ಸ್ಗಳು ಹಾಗೂ ಪ್ರತಿ ಸೈನಿಕನ ಬಳಿಯೂ ನಿತ್ಯ ಆಹಾರದ ಜತೆಗೆ ಕನಿಷ್ಠ 24 ಗಂಟೆಯವರೆಗೆ ಸಾಕಾಗುವಷ್ಟು ಹೆಚ್ಚುವರಿ ತುರ್ತು ಆಹಾರ ಪದಾರ್ಥಗಳು ಇರುತ್ತವೆ.ಇವೆಲ್ಲ ಟಿನ್ಕ್ಯಾನ್ಗಳಲ್ಲಿ ಇರುತ್ತವೆ. ಇನ್ನು ಅತ್ಯಂತ ಚಳಿಯೂ ಒಳನುಸುಳದಂಥ ಬೆಚ್ಚಗಿನ ಸುರಕ್ಷತ ಟೆಂಟ್ಗಳನ್ನೂ ಸೇನೆಗೆ ಒದಗಿಸಲಾಗಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
ಹಿಂಸಾಚಾರದ ಎಫೆಕ್ಟ್: ಹೋರಾಟ ಇಬ್ಭಾಗ-ಪ್ರತಿಭಟನೆಯಿಂದ ಹಿಂದೆ ಸರಿದ 2 ಸಂಘಟನೆ
ಟ್ರ್ಯಾಕ್ಟರ್ ರಾಲಿ, ಹಿಂಸಾಚಾರ ಪ್ರಕರಣ: ಯಾದವ್, ಟಿಖಾಯತ್ ಸೇರಿ ಹಲವರ ವಿರುದ್ಧ ಕೇಸ್
ದೆಹಲಿ: ಟ್ರ್ಯಾಕ್ಟರ್ ರಾಲಿ ವೇಳೆ ಹಿಂಸಾಚಾರ; 200 ಮಂದಿ ದೆಹಲಿ ಪೊಲೀಸರ ವಶಕ್ಕೆ
ಭಾರತದ ಈ ನಗರದಲ್ಲಿ ‘100 ರೂ. ದಾಟಿದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ .?’