ಚಳಿ, ಗಾಳಿಯ ಹೇಗೆ ಎದುರಿಸುತ್ತದೆ ಸೇನೆ?


Team Udayavani, Dec 3, 2020, 6:25 AM IST

ಚಳಿ ಗಾಳಿಯ ಹೇಗೆ ಎದುರಿಸುತ್ತದೆ ಸೇನೆ?

ಚೀನದೊಂದಿಗೆ ಬಿಕ್ಕಟ್ಟು ಮುಂದುವರಿದಿರುವ ಕಾರಣ ಭಾರತೀಯ ಸೇನೆಯು ಸುಮಾರು 50 ಸಾವಿರ ಯೋಧರನ್ನು ಎಲ್‌ಎಸಿಯ ಎತ್ತರದ ಪ್ರದೇಶದಲ್ಲಿ ನಿಯೋಜಿಸುತ್ತಿದೆ. ಡಿಸೆಂಬರ್‌ ತಿಂಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಪ್ರದೇಶಗಳಲ್ಲಿ ತಾಪಮಾನ -15ರಿಂದ 3 ಡಿಗ್ರಿಯಷ್ಟಿರುತ್ತದೆ ಜನವರಿಯಲ್ಲಂತೂ -40 ಡಿಗ್ರಿ ಸೆಲ್ಸಿಯಸ್‌ ತಲುಪುವುದೂ ಉಂಟು. ಈ ಸವಾಲನ್ನು ಸೇನೆ ಹೇಗೆ ಎದುರಿಸುತ್ತದೆ ಎನ್ನುವ ಮಾಹಿತಿ ಇಲ್ಲಿದೆ…

ಮೂರು ರೀತಿಯ ಸವಾಲು
1962ರಲ್ಲಿ ಪ್ರಕಟವಾದ ಹಿಸ್ಟರಿ ಆಫ್ ದ ಕಾನ್‌ಫ್ಲಿಕ್ಟ್ ವಿತ್‌ ಚೀನ ಪುಸ್ತಕವು, ಲಡಾಖ್‌ನಲ್ಲಿ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಬಣ್ಣಿಸುತ್ತದೆ: “”ಮಧ್ಯಾಹ್ನದ ವೇಳೆಗೆ ಜೋರಾಗಿ ಶೀತಗಾಳಿ ಬೀಸಲಾರಂಭಿಸಿ ಮರುದಿನ ಬೆಳಗ್ಗೆಯವರೆಗೂ ಮುಂದುವರಿಯುತ್ತದೆ.

ಎಷ್ಟು ಚಳಿ ಇರುತ್ತದೆಂದರೆ ಬರಿಗೈಯಿಂದ ಲೋಹವನ್ನು ಮುಟ್ಟಿದರೂ ಅಪಾಯ ಎದುರಾಗುತ್ತದೆ. ಬಿಸಿಯಿಂದ ಗಾಯ ಹೇಗಾಗುತ್ತದೋ, ಚಳಿಯಿಂದಲೂ ಅಷ್ಟೇ ಗಾಯವಾಗಬಲ್ಲದು” ಎನ್ನುತ್ತದೆ ಆ ಪುಸ್ತಕ. ಈ ವಿಚಾರವಾಗಿ ನಿವೃತ್ತ ಮೇಜರ್‌ ಜನರಲ್‌ ಎ.ಪಿ ಸಿಂಗ್‌ ಹೇಳುವುದು ಹೀಗೆ: “”ಆ ಎತ್ತರದ ಪ್ರದೇಶಗಳಲ್ಲಿ ಯೋಧರು ಮೂರು ರೀತಿಯ ಸವಾಲು ಎದುರಿಸುತ್ತಾರೆ. ಒಂದು ಅತ್ಯಂತ ಚಳಿ ಹಾಗೂ ವೇಗದ ಗಾಳಿಯಿಂದ. ಎರಡನೆಯದು ಆಮ್ಲಜನಕದ ಕೊರತೆಯಿಂದ ಹಾಗೂ ಮೂರನೆಯದು ಶತ್ರುಗಳಿಂದ”

ಸೂಕ್ತ ತಯಾರಿ
ಎತ್ತರದ ಶೀತಲ ಪ್ರದೇಶಗಳಿಗೆ ನಿಯೋಜಿತವಾಗುವ ಸೈನಿಕರು ಆಮ್ಲಜನಕ, ಚಳಿ, ಗಾಳಿಯ ಸವಾಲಿನ ನಡುವೆಯೇ ಏನಿಲ್ಲವೆಂದರೂ 20-45 ಕೆ.ಜಿ ಭಾರವನ್ನು ಹೊತ್ತು ಸಾಗುತ್ತಾರೆ. ಆ ಕಾರಣಕ್ಕಾಗಿ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಲೇಹ್‌ ಹಾಗೂ ಮುಖ್‌ಪರಿಯಂಥ ಅತಿ ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಮಟ್ಟ 25ರಿಂದ 65 ಪ್ರತಿಶತ ಕಡಿಮೆ ಇರುತ್ತದೆ. ಇದನ್ನು ಎದುರಿಸಲು ಸೈನಿಕರಿಗೆ ಮೂರು ಹಂತದ ತರಬೇತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಆರು ದಿನಗಳವರೆಗೆ 9000-12000 ಅಡಿ ಎತ್ತರದ ಪ್ರದೇಶಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಸೈನಿಕರು ಎರಡು ದಿನಗಳ ವಿಶ್ರಾಂತಿಯ ಅನಂತರ, ನಾಲ್ಕು ದಿನಗಳವರೆಗೆ ಚಿಕ್ಕ ಭಾರಹೊತ್ತು ನಡೆಯುವುದು ಹಾಗೂ ಬೆಟ್ಟಗಳನ್ನು ಏರವುದು ಮಾಡುತ್ತಾರೆ. ಎರಡನೇ ಹಂತದ ತರಬೇತಿ 4 ದಿನಗಳವರೆಗೆ 15 ಸಾವಿರ ಅಡಿ ಎತ್ತರದಲ್ಲಿ ನಡೆಯುತ್ತದೆ. ಆಗಲೂ ನಡಿಗೆ, ಭಾರ ಹೊರುವುದು, ಬಂಡೆಗಲ್ಲುಗಳನ್ನು ಏರುವ ತರಬೇತಿ ನೀಡಲಾಗುತ್ತದೆ. ಇವರೆಲ್ಲರ ಜತೆಗೆ ಸಿಯಾಚಿನ್‌ನಂಥ ಪ್ರದೇಶ ಹಾಗೂ ಲಡಾಖ್‌ನಲ್ಲಿ ವರ್ಷಗಳಿಂದ ಚಳಿಗಾಲದ ಸಂದರ್ಭ ಕಾವಲು ಕಾಯುವ ವಿಶೇಷ ತರಬೇತಿ ಹೊಂದಿರುವ ಪಡೆಗಳೂ ಇರುತ್ತವೆ.

ಸುರಕ್ಷತ ಪರಿಕರಗಳು
ಚಳಿಯಿಂದ ರಕ್ಷಣೆ ನೀಡುವುದಕ್ಕಾಗಿ ಸೂಕ್ತ ಬಟ್ಟೆಗಳು, ಬಹುಲೇಯರ್‌ಗಳ ಜಾಕೆಟ್‌, ಮುಖಗವಸು, ಹೆಲ್ಮೆಟ್‌ ಮತ್ತು ವಿಶೇಷ ಕನ್ನಡಕ ನೀಡಲಾಗುತ್ತದೆ. ಇನ್ನು ಅವರ ಬಳಿ ಇರುವ ಸಸ್ಟೇನೆನ್ಸ್‌ ಕಿಟ್‌ನಲ್ಲಿ ಸ್ಲಿàಪಿಂಗ್‌ ಬ್ಯಾಗ್‌, ಹೆಚ್ಚುವರಿ ಸಾಕ್ಸ್‌ಗಳು ಹಾಗೂ ಪ್ರತಿ ಸೈನಿಕನ ಬಳಿಯೂ ನಿತ್ಯ ಆಹಾರದ ಜತೆಗೆ ಕನಿಷ್ಠ 24 ಗಂಟೆಯವರೆಗೆ ಸಾಕಾಗುವಷ್ಟು ಹೆಚ್ಚುವರಿ ತುರ್ತು ಆಹಾರ ಪದಾರ್ಥಗಳು ಇರುತ್ತವೆ.ಇವೆಲ್ಲ ಟಿನ್‌ಕ್ಯಾನ್‌ಗಳಲ್ಲಿ ಇರುತ್ತವೆ. ಇನ್ನು ಅತ್ಯಂತ ಚಳಿಯೂ ಒಳನುಸುಳದಂಥ ಬೆಚ್ಚಗಿನ ಸುರಕ್ಷತ ಟೆಂಟ್‌ಗಳನ್ನೂ ಸೇನೆಗೆ ಒದಗಿಸಲಾಗಿದೆ.

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.