ಡಿಜಿಬೌಟಿ ಚೀನ ನೆಲೆ: ಭಾರತವೇ ಗುರಿ; ಅಮೆರಿಕದ ಸಂಸತ್ ವರದಿಯಲ್ಲಿ ಉಲ್ಲೇಖ
Team Udayavani, Dec 1, 2022, 7:25 AM IST
ನವದೆಹಲಿ: ಆಫ್ರಿಕಾ ಖಂಡದ ಡಿಜಿಬೌಟಿಯಲ್ಲಿ ಚೀನ ವತಿಯಿಂದ ಸೇನಾ ನೆಲೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅದರ ನಿರ್ಮಾಣ ಗುರಿ ಭಾರತವೇ ಗುರಿ ಆಗಿದೆ ಎಂದು ಅಮೆರಿಕದ ಸಂಸತ್ಗೆ ರಕ್ಷಣಾ ಸಚಿವಾಲಯ ಪೆಂಟಗನ್ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೇನಾ ನೆಲೆಗೆ ಶೀಘ್ರ ಯುದ್ಧ ವಿಮಾನಗಳು, ದೊಡ್ಡ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಚೀನ ಸರ್ಕಾರ ನಿಯೋಜಿಸಲಿದೆ. ಹಿಂದೂ ಮಹಾ ಸಾಗರದಲ್ಲೇ ಈ ನೆಲೆ ಇರುವುದರಿಂದ ಇದು ಭಾರತೀಯ ನೌಕಾ ಪಡೆಗೆ ಪ್ರಮುಖ ಭದ್ರತಾ ಸವಾಲಾಗಲಿದೆ.
ಡಿಜಿಬೌಟಿ ಸೇನಾ ನೆಲೆಯಲ್ಲಿ ಚೀನ ನೌಕಾ ಸೇನೆಗೆ ಸೇರಿದ ದೊಡ್ಡ ಸರಬರಾಜು ಹಡಗು ನಿಯೋಜನೆಗೊಂಡಿರುವುದನ್ನು ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾದ ಉಪಗ್ರಹ ಚಿತ್ರ ದೃಢಪಡಿಸಿತ್ತು.
“2022ರ ಮಾರ್ಚ್ನಲ್ಲಿ ಡಿಜಿಬೌಟಿಯಲ್ಲಿ ಚೀನ ನೌಕಾ ಸೇನೆಯ ಸರಬರಾಜು ಹಡಗು “ಪ್ಯೂಚಿ’ ನಿಯೋಜಿಸಲಾಗಿತ್ತು. ಪ್ರಸ್ತುತ ನೌಕಾ ನೆಲೆಯು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧಗೊಂಡಿದೆ,’ ಎಂದು ಪೆಂಟಗನ್ ತಿಳಿಸಿದೆ.
ಪ್ರಸ್ತುತ ಚೀನ ಬಳಿ ಮೂರು ಯುದ್ಧ ವಿಮಾನ ವಾಹಕ ನೌಕೆಗಳಿದ್ದರೆ, ಭಾರತದ ಬಳಿ ಎರಡು ಯುದ್ಧ ವಿಮಾನ ವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಇದೆ.
ಚೀನ ಧಮಕಿ:
ಭಾರತದ ಜತೆಗಿನ ಸಂಬಂಧದ ವಿಚಾರವಾಗಿ ಮೂಗು ತೂರಿಸದಿರಿ ಎಂದು ಅಮೆರಿಕಕ್ಕೆ ಚೀನ ಎಚ್ಚರಿಕೆ ನೀಡಿದೆ.
ಅಮೆರಿಕ ಜತೆ ಭಾರತ ಹೆಚ್ಚು ಆಪ್ತವಾಗುವುದನ್ನು ತಪ್ಪಿಸಲು ಗಡಿ ಸಮಸ್ಯೆ ಉದ್ಭವ ಆಗದಂತೆ ಚೀನ ಗಮನ ಹರಿಸುತ್ತಿದೆ ಎಂದು ಪೆಂಟಗನ್ ಹೇಳಿದೆ.
2020 ಮೇ ನಂತರ ಪೂರ್ವ ಲಡಾಖ್ನ ಎಲ್ಎಸಿ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಚೀನ ಮತ್ತು ಭಾರತೀಯ ಪಡೆಗಳು ಘರ್ಷಣೆಯಲ್ಲಿ ತೊಡಗಿದ್ದವು. ಈ ಹಿನ್ನೆಲೆಯಲ್ಲಿ ಗಡಿಯ ಎರಡೂ ಬದಿಗಳಲ್ಲಿ ಸೇನೆಯನ್ನು ನಿಯೋಜಿಸಲಾಯಿತು. ನಂತರ ಸಂಘರ್ಷದ ಗಂಭೀರತೆಯನ್ನು ತಗ್ಗಿಸಲು ಚೀನ ಸರ್ಕಾರ ಪ್ರಯತ್ನಿಸಿತು ಎಂದೂ ಪೆಂಟಗನ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ