ಠಾಣೆಗಳಲ್ಲೇ ಮಾನವ ಹಕ್ಕು ಉಲ್ಲಂಘನೆ
Team Udayavani, Aug 9, 2021, 7:30 AM IST
ಹೊಸದಿಲ್ಲಿ: ಮಾನವ ಹಕ್ಕುಗಳು ನಿಯಮ ಅತಿ ಹೆಚ್ಚು ಉಲ್ಲಂಘನೆಯಾಗುತ್ತಿರುವುದು ಪೊಲೀಸ್ ಠಾಣೆಗಳಲ್ಲೇ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸಹಾಯಕ ಆ್ಯಪ್ ಬಿಡುಗಡೆ ಮಾಡಿ ಅವರು ಈ ಮಾತುಗಳನ್ನಾಡಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಕೊರತೆಯಿಂದಾಗಿ ಈ ರೀತಿ ಆಗುತ್ತಿದೆ.
ಪ್ರತೀ ಪೊಲೀಸ್ ಠಾಣೆಯಲ್ಲಿ ನ್ಯಾಯಾಂಗದ ಕುರಿತಾಗಿ ಫಲಕಗಳನ್ನು ಹಾಕುವುದರಿಂದ ಇದು ಕಡಿಮೆಯಾಗಬಹುದು. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಬಡ ವರ್ಗದ ಜನರು ನಂಬಿಕೆ ಬೆಳೆಸಿಕೊಳ್ಳಬೇಕೆಂದರೆ ಮೊದಲು ಅದರ ಅಸ್ತಿತ್ವದ ಬಗ್ಗೆ ಅವರಲ್ಲಿ ಭರವಸೆ ಮೂಡಿಸಬೇಕು ಎಂದಿದ್ದಾರೆ.