ಅಂತರ್ ಧರ್ಮದ ಮರ್ಯಾದಾ ಹತ್ಯೆ: ಈದ್ ಶಾಪಿಂಗ್ಗೆ ಚಿನ್ನದ ಸರ ಮಾರಿದ್ದ ಹಿಂದೂ ಪತಿ
ಮುಸ್ಲಿಂ ಪತ್ನಿಗಾಗಿ 25 ಸಾವಿರಕ್ಕೆ ಆಭರಣ ಮಾರಿದ್ದ ಹತ್ಯೆಗೀಡಾದ ನಾಗರಾಜು
Team Udayavani, May 7, 2022, 2:37 PM IST
ಹೈದರಾಬಾದ್ : ಅಂತರ್ ಧರ್ಮೀಯ ವಿವಾಹದ ಕಾರಣಕ್ಕೆ ಪತ್ನಿಯ ಮನೆಯವರಿಂದಲೇ ಹತ್ಯೆಗೀಡಾದ ವ್ಯಕ್ತಿ ಈದ್ ಶಾಪಿಂಗ್ ಗಾಗಿ 25,000 ರೂ.ಗೆ ಚಿನ್ನದ ಸರ ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಬುಧವಾರ ರಾತ್ರಿ ಹೈದರಾಬಾದ್ನ ಸರೂರ್ನಗರದಲ್ಲಿ ಕಾರು ಶೋರೂಂನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಬಿ ನಾಗರಾಜು ಅವರನ್ನು ಅವರ ಪತ್ನಿ ಅಶ್ರಿನ್ ಅವರ ಸಹೋದರ ಮತ್ತು ಇನ್ನೊಬ್ಬ ಸಂಬಂಧಿಕ ಸಾರ್ವಜನಿಕರ ಎದುರೇ ಬರ್ಬರ ವಾಗಿ ಕೊಚ್ಚಿ ಹತ್ಯೆ ಮಾಡಿದ್ದರು. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಈದ್ ಶಾಪಿಂಗ್ಗಾಗಿ ಪತ್ನಿಯನ್ನು ಚಾರ್ಮಿನಾರ್ಗೆ ಕರೆದುಕೊಂಡು ಹೋಗಲು 25,000 ರೂ.ಗೆ ಚಿನ್ನದ ಸರವನ್ನು ಮಾರಾಟ ಮಾಡಿರುವುದಾಗಿ ನಾಗರಾಜು ಹೇಳಿದ್ದು, ಅವರು ತುಂಬಾ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದ ವ್ಯಕ್ತಿಯಾಗಿದ್ದರು . ಅವರು ಸಾಮಾನ್ಯವಾಗಿ ಮನೆಗೆ ಹೊರಡುವ ಮೊದಲು ತಮ್ಮ ಕ್ಯಾಶುಯಲ್ ಉಡುಗೆಗಳನ್ನು ಬದಲಾಯಿಸುತ್ತಾರೆ, ಆದರೆ ಬುಧವಾರ ಸಂಜೆ, ಅವರು ತಮ್ಮ ಸಮವಸ್ತ್ರದಲ್ಲಿ ಹೊರಟಿದ್ದರು, ಏಕೆಂದರೆ ಅವರು ತಡವಾಗಿ ಹೋಗಿದ್ದರು ಮತ್ತು ಅವರ ಹೆಂಡತಿಯನ್ನು ಅವರ ಸಹೋದರಿಯ ಮನೆಯಿಂದ ಕರೆದುಕೊಂಡು ಹೋಗಬೇಕಾಗಿತ್ತು ಎಂದು ನಾಗರಾಜು ಕೆಲಸ ಮಾಡುತ್ತಿದ್ದ ಕಾರ್ ಶೋರೂಂನ ಹೆಚ್ ಆರ್ ಮ್ಯಾನೇಜರ್ ಕೆ. ಸತೀಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೇಶದೆಲ್ಲೆಡೆ ಕೋಮು ಸೂಕ್ಷ್ಮ ಪರಿಸ್ಥಿತಿ ಇರುವ ವೇಳೆಯಲ್ಲೇ ನಡೆದ ಈ ಹತ್ಯೆ ಭಾರಿ ಸುದ್ದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ