ತೆಲಂಗಾಣದ ಆರ್ಎಸ್ಎಸ್- ಬಿಜೆಪಿ ನಾಯಕರ ಹತ್ಯೆ ಸಂಚು ವಿಫಲ
ಪೊಲೀಸರಿಂದ ಮೂವರ ಬಂಧನ
Team Udayavani, Oct 2, 2022, 10:58 PM IST
ಹೈದರಾಬಾದ್/ಅಯೋಧ್ಯೆ: ಹೈದರಾಬಾದ್ನ ತೆಲಂಗಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ನಾಯಕರನ್ನು ಹತ್ಯೆ ಮಾಡುವ ಸಂಚನ್ನು ವಿಫಲಗೊಳಿಸಲಾಗಿದೆ. ಪ್ರಕರಣದ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅವರು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದಾರೆ. ಅವರನ್ನು ಮೊಹಮದ್ ಅಬ್ದುಲ್ ಜಾಹೇದ್(39) ಹಾಗೂ ಆತನ ಇಬ್ಬರು ಸಹಚರರಾಗಿರುವ ಮಾಜ್ ಮತ್ತು ಸಮೀಯುದ್ದೀನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ಪಾಕಿಸ್ತಾನದಲ್ಲಿರುವ ನಾಯಕನೊಬ್ಬನ ನಿರ್ದೇಶನದಂತೆ ದಾಳಿ ನಡೆಸಲು ಮುಂದಾಗಿದ್ದರು. ಅದಕ್ಕೆಂದೇ ಭಾನುವಾರದಂದು ನಾಲ್ಕು ಗ್ರೆನೇಡ್ಗಳನ್ನು ಸಂಗ್ರಹಿಸಿಕೊಂಡಿದ್ದರು ಎಂದು ಹೇಳಲಾಗಿದೆ.
ಮೊಹಮದ್ ಅಬ್ದುಲ್ ಜಾಹೇದ್ನ ಸಹೋದರ ಮೊಹಮದ್ ಅಬ್ದುಲ್ ಶಾಹೇದ್ ಹರ್ಕತ್-ಉಲ್-ಜಿಹಾದ್-ಎ-ಇಸ್ಲಾಮಿ ಸಂಘಟನೆಯ ಉಗ್ರನಾಗಿದ್ದು, 2005ರಲ್ಲಿ ಬೇಗಂ ಪೇಟ್ ಟಾಸ್ಕ್ಫೋರ್ಸ್ ಕಚೇರಿಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣದ ಆರೋಪಿಯಾಗಿದ್ದಾನೆ.
ಇದೇ ವೇಳೆ, ಅಯೋಧ್ಯೆಯಲ್ಲಿ ನಿಷೇಧಿ ಪಿಎಫ್ಐನ ಸದಸ್ಯ ಮೊಹಮ್ಮದ್ ಜೈದ್ ಎಂಬಾತನನ್ನು ಬಂಧಿಸಲಾಗಿದೆ. ಆತ ತಬ್ಲೀ ಜಮಾತ್ನ ಸದಸ್ಯನೂ ಆಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ