ಹ್ಯುಂಡೈ ವರ್ನಾಗೆ ಇಂಡಿಯನ್ ಕಾರ್ ಆಫ್ ದಿ ಈಯರ್ ಪ್ರಶಸ್ತಿ
Team Udayavani, Dec 16, 2017, 4:17 PM IST
ನವದೆಹಲಿ: ಪ್ರಮುಖ ಕಾರು ತಯಾರಕ ಸಂಸ್ಥೆ ಹ್ಯುಂಡೈ ಮೋಟರ್ ಇಂಡಿಯಾ ಲಿ., (ಎಚ್ಎಂಐಎಲ್)ನ ನೆಕ್ಸ್ಟ್ ಜೆನ್ ವರ್ನಾ “2018ರ ಇಂಡಿಯನ್ ಕಾರ್ ಆಫ್ ದಿ ಈಯರ್’ (ಐಸಿಒಟಿವೈ) ಪ್ರಶಸ್ತಿಗೆ ಭಾಜನವಾಗಿದೆ.
ಸತತವಾಗಿ 5 ಬಾರಿ ಐಸಿಒಟಿವೈ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಸಾಧನೆ ಮೆರೆದಿರುವ ಹ್ಯುಂಡೈ ಸಂಸ್ಥೆ 2008, 2014, 2015, 2016 ಮತ್ತು 2018ರ ಪ್ರಶಸ್ತಿಯನ್ನು ಅನುಕ್ರಮವಾಗಿ ವರ್ನಾ, ಕ್ರೆಟಾ, ಎಲೈಟ್ ಐ20, ಗ್ರಾಂಡ್ ಐ10 ಹಾಗೂ ಐ10 ಕಾರುಗಳು ಪಡೆದಿವೆ.
ಗುರುವಾರ ದೆಹಲಿಯಲ್ಲಿ ಪ್ರಶಸ್ತಿ ಸೀಕರಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈ.ಕೆ. ಕೂ, ಆಟೋಮೊಟಿವ್ ಕ್ಷೇತ್ರದ ಪ್ರತಿಷ್ಠಿತ ಐಸಿಒಟಿವೈ ಪ್ರಶಸ್ತಿಯನ್ನು ನಮ್ಮ ಸಂಸ್ಥೆಯ ಕಾರುಗಳು ಗೆಲ್ಲುತ್ತಿರುವುದು ಅತೀವ ಸಂತಸ ಹಾಗೂ ಗೌರವ ತಂದಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಮೇಡ್ ಫಾರ್ ದಿ ವರ್ಲ್ಡ್ ಉತ್ಪನ್ನವಾಗಿ ನೆಕ್ಟ್ ಜೆನ್ ವರ್ನ ಹೊರಹೊಮ್ಮಿರುವುದು ಹಾಗೂ ಸೆಡಾನ್ ಕಾರುಗಳಲ್ಲಿ ತಂತ್ರಜ್ಞಾನ, ಗುಣಮಟ್ಟ ಜನರ ಮೆಚ್ಚುಗೆ ಗಳಿಸಿರುವುದು ಶ್ಲಾಘನೀಯ ಎಂದರು.
ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿ., ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯ ಅವರು ಹ್ಯುಂಡೈ ವರ್ನದ ತಾಂತ್ರಿಕ, ವಿನ್ಯಾಸ, ಕಾಸ್ಟ್ ಎಫೆಕ್ಟಿವ್ನೆಸ್, ಸ್ಥಳೀಯ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವಿಕೆ ಗ್ರಾಹಕರಿಗೆ ಸಂತೃಪ್ತಿ ತಂದಿವೆ.
ಆದ್ದರಿಂದ ಐದು ಬಾರಿ ಬೇರೆ ಬೇರೆ ಸಂಸ್ಥೆಯ ಕಾರುಗಳು ಐಎಂಒಟಿವೈ ಪ್ರಶಸ್ತಿಗೆ ಭಾಜನವಾಗಿವೆ. ಅಲ್ಲದೆ, ಆಟೋಮೊಬೈಲ್ ಉದ್ಯಮದಲ್ಲಿ ಐಸಿಒಟಿವೈ ಹಾಗೂ ಇಂಡಿಯನ್ ಮೋಟರ್ ಆಫ್ ದಿ ಯಿಯರ್ (ಐಎಂಒಟಿವೈ) ಎರಡೂ ಸಮನಾರ್ಥವಾಗಿದ್ದು ವರ್ನ 2018ರ ಐಸಿಒಟಿವೈ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಐಸಿಒಟಿವೈ ಸಂಸ್ಥಾಪಕ ಸದಸ್ಯ ಮತ್ತು ತೀರ್ಪುಗಾರರ ಮಂಡಳಿ ಅಧ್ಯಕ್ಷ ಬಾಬ್ ರುಪಾನಿ, ಆಟೋ ಟುಡೆ ಸಂಪಾದಕ ಯೋಗೆಂದ್ರ ಪ್ರತಾಪ್, ಹೆಚ್ಎಂಐಎಲ್ ಇಡಿ (ಮಾರಾಟ) ಎಸ್.ಜೆ. ಹ, ನಿರ್ದೇಶಕ (ಮಾರುಕಟ್ಟೆ) ರಾಕೇಶ್ ಶ್ರೀವಾಸ್ತವ ಹಾಗೂ ತೀರ್ಪುಗಾರರ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!