ನಾನೀಗ ರಾಜಕೀಯ ಮಾತನಾಡುವಂತಿಲ್ಲ: ವೆಂಕಯ್ಯ ನಾಯ್ಡು
Team Udayavani, Aug 10, 2017, 8:20 AM IST
ಹೈದರಾಬಾದ್: “ನಾನೀಗ ಹೊಸ ಹುದ್ದೆಗೇರಿದ್ದೇನೆ. ಅದರ ಪ್ರಕಾರ ನಾನು ರಾಜಕೀಯದ ಬಗ್ಗೆ ಮಾತನಾಡುವಂತಿಲ್ಲ. ಆದರೆ ಜನತೆಯ ಒಳಿತಿನ ದೃಷ್ಟಿಯಿಂದ ಪ್ರಶ್ನೆಗಳನ್ನು ಎತ್ತದೇ ಇರುವುದಿಲ್ಲ’. ಹೀಗೆ ಹೇಳಿದವರು ಉಪರಾಷ್ಟ್ರಪತಿಯಾಗಿ ಚುನಾಯಿತರಾಗಿರುವ ಎಂ.ವೆಂಕಯ್ಯ ನಾಯ್ಡು.
ಬುಧವಾರ ಹೈದರಾಬಾದ್ನಲ್ಲಿ ಪತ್ರಕರ್ತರ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿ ದರು. ನಾನೀಗ ಈ ಹಿಂದೆ ಉಪರಾಷ್ಟ್ರಪತಿಗಳಾಗಿ ಇದ್ದವರು ಹೇಗೆ ಕರ್ತವ್ಯ ನಿರ್ವಹಿಸಿದ್ದರು, ಅದರಲ್ಲೂ ಎಸ್. ರಾಧಾಕೃಷ್ಣನ್ ಮತ್ತು ಜಾಕಿರ್ ಹುಸೇನ್ರ ಕಾರ್ಯ ವೈಖರಿ ಹೇಗಿತ್ತು ಎಂಬ ಬಗ್ಗೆ ಅಧ್ಯಯನ ನಡೆಸುತ್ತಿದ್ದೇನೆ ಎಂದರು. ಅಲ್ಲದೇ ಈ ಜವಾಬ್ದಾರಿಯನ್ನು ನಿರ್ವಹಿಸುವ ಕುರಿತು ಮಾರ್ಗದರ್ಶನ ಪಡೆ ಯಲು ಕೆಲ ಅಧಿಕಾರಿಗಳನ್ನು ಭೇಟಿಯಾಗುವು ದಾಗಿಯೂ ನುಡಿದರು. ರಾಜ್ಯಸಭೆಯ ಅಧ್ಯಕ್ಷರೂ ಆದ ತಾವು ಮಸೂದೆ ಜಾರಿಗೆ ಉತ್ತಮ ವಾತಾವರಣ ನಿರ್ಮಿಸಲು ಶ್ರಮಿಸುವುದಾಗಿ ಹೇಳಿದರು.