ಪಂಚಕುಲ ಮಾಸ್ಟರ್ ಮೈಂಡ್ ನಾನೇ: ಹನಿಪ್ರೀತ್ ತಪ್ಪೊಪ್ಪಿಗೆ
Team Udayavani, Oct 11, 2017, 11:37 AM IST
ಚಂಡೀಗಢ : 38 ಜೀವಗಳನ್ನು ಬಲಿಪಡೆದಿದ್ದ ಪಂಚಕುಲ ಹಿಂಸೆಯ ಮಾಸ್ಟರ್ ಮೈಂಡ್ ನಾನೇ ಎಂದು ಡೇರಾ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್ನ ವಿವಾದಾತ್ಮಕ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ಒಪ್ಪಿಕೊಂಡಿರುವುದಾಗಿ ಆಕೆಯನ್ನು ಪ್ರಶ್ನಿಸುತ್ತಿರುವ ಹರಿಯಾಣ ಪೊಲೀಸ್ನ ಎಸ್ಐಟಿ ತಂಡ ಹೇಳಿದೆ.
ಪಂಚಕುಲದಲ್ಲಿ ಹಿಂಸೆಯನ್ನು ಸೃಷ್ಟಿಸುವ ಹೊಣೆಗಾರಿಕೆಯನ್ನು ಡೇರಾ ಕಾರ್ಯಕರ್ತರಿಗೆ ನೀಡಲಾಗಿತ್ತು ಮತ್ತು ಅದಕ್ಕಾಗಿ ಹಣವನ್ನು ಪಾವತಿಸುವಂತೆಯೂ ಸೂಚಿಸಲಾಗಿತ್ತು ಎಂದಾಕೆ ಹೇಳಿದ್ದಾಳೆ.
ಪಂಚಕುಲ ಹಿಂಸೆ ಮತ್ತು ಡೇರಾ ಅಕ್ರಮಗಳ ಕುರಿತಾದ ಎಲ್ಲ ಮಾಹಿತಿಗಳು ಹನಿಪ್ರೀತ್ ಳ ಲ್ಯಾಪ್ ಟಾಪ್ನಲ್ಲಿ ದಾಖಲಾಗಿದ್ದು ತಾವು ಅದನ್ನು ಶೀಘ್ರವೇ ವಶಪಡಿಸಿಕೊಳ್ಳಲಿದ್ದೇವೆ ಎಂದು ಹರಿಯಾಣ ಪೊಲೀಸರು ಕೋರ್ಟಿಗೆ ತಿಳಿಸಿದ್ದಾರೆ.
ಆಗಸ್ಟ್ 25ರಂದು ಪಂಚಕುಲದಲ್ಲಿ ಹಿಂಸೆಯನ್ನು ಭುಗಿಲೇಳಿಸಬೇಕೆಂಬ ನಿರ್ಧಾರವನ್ನು ಆಗಸ್ಟ್ 17ರ ಡೇರಾ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 2002ರ ರೇಪ್ ಕೇಸ್ ನಲ್ಲಿ ಡೇರಾ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್ ಅಪರಾಧಿಯೆಂದು ಕೋರ್ಟ್ ಘೋಷಿಸುವುದಕ್ಕೆ ಮುನ್ನ ಪಂಚಕುಲದಲ್ಲಿ ಹಿಂಸೆ ಭುಗಿಲೇಳಿಸಲು ನಿರ್ಧರಿಸಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್