ಪಾಕ್ ಗಡಿಯಲ್ಲಿ ಭಾರತೀಯ ವಾಯು ಪಡೆಯಿಂದ ಭಾರೀ ಸನ್ನದ್ಧತೆ ಕವಾಯತು
Team Udayavani, Mar 15, 2019, 11:06 AM IST
ಹೊಸದಿಲ್ಲಿ : ಭಾರತೀಯ ವಾಯು ಪಡೆ ಪಂಜಾಬ್ ಮತ್ತು ಜಮ್ಮು ಗಡಿಯಲ್ಲಿ ನಿನ್ನೆ ಗುರುವಾರ ರಾತ್ರಿ ಮಹತ್ತರ ಸನ್ನದ್ಧತೆ ಕವಾಯತು ನಡೆಸಿದ್ದು ಇದರಲ್ಲಿ ದೊಡ್ಡ ಸಂಖ್ಯೆಯ ಯುದ್ಧ ವಿಮಾನಗಳು ಪಾಲ್ಗೊಂಡಿವೆ.
ಈ ಕವಾಯತಿನಲ್ಲಿ ಮುಂಚೂಣಿಯ ಯುದ್ಧ ವಿಮಾನಗಳು ಸೇರಿದಂತೆ ಭಾರತೀಯ ವಾಯು ಪಡೆಯ ಜೆಟ್ ವಿಮಾನಗಳು ಸೂಪರ್ ಸಾನಿಕ್ ವೇಗದಲ್ಲಿ ಪಂಜಾಬ್ ನ ಅಮೃತಸರ ಸೇರಿದಂತೆ ಗಡಿ ಜಿಲ್ಲೆಗಳ ಆಗಸದಲ್ಲಿ ಹಾರಾಟ ನಡೆಸಿದವು.
ಪಾಕ್ ವಾಯು ಪಡೆಯ ಫೈಟರ್ ಜೆಟ್ಗಳು ಭಾರತದ ವಾಯು ಗಡಿ ಉಲ್ಲಂಘನೆಗೈದು ಒಳನುಗ್ಗಿ ಬರುವ ಯಾವುದೇ ರೀತಿಯ ಅಪಾಯಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಈ ಸನ್ನದ್ಧತೆ ಕವಾಯತನ್ನು ನಡಸಲಾಗಿದೆ ಎಂದು ವಾಯು ಪಡೆ ಮೂಲಗಳು ಹೇಳಿವೆ.
ಪಾಕಿಸ್ಥಾನದ ಖೈಬರ್ ಫಖ್ತೂನ್ಖ್ವಾ ಪ್ರಾಂತ್ಯದ ಬಾಲಾಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಅತ್ಯಂತ ವಿನಾಶಕಾರಿ ಬಾಂಬ್ ದಾಳಿಯನ್ನು ಕಳೆದ ಫೆ.26ರಂದು ನಡೆಸಿತ್ತು. ಅಂದಿನಿಂದ ಈ ವರೆಗೂ ಪಾಕ್ ಗಡಿಯ ಉದ್ದಕ್ಕೂ ಭಾರತೀಯ ವಾಯು ಪಡೆ ಕಟ್ಟೆಚ್ಚರ ವಹಿಸಿದೆ. ಈ ನಡುವೆ ಪಾಕ್ ಕಡೆಯಿಂದ ಹಾರಿ ಬಂದ ಎರಡು ಡ್ರೋನ್ಗಳನ್ನು ಕೂಡ ಹೊಡೆದುರುಳಿಸಲಾಗಿದೆ.
ಎರಡು ದಿನಗಳ ಹಿಂದಷ್ಟೇ ಪಾಕ್ ವಾಯು ಪಡೆಯ ಜೆಟ್ ಗಳು ಸೂಪರ್ ಸಾನಿಕ್ ವೇಗದಲ್ಲಿ ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆಯಿಂದ ಕೇವಲ 10 ಕಿ.ಮೀ. ಆಚೆ ಪಿಓಕೆ ಗಡಿ ಭಾಗದಲ್ಲಿ ಭಯಾನಕ ಹಾರಾಟ ನಡೆಸಿದ್ದವು.
ಈ ಹಿನ್ನೆಲೆಯಲ್ಲಿ ಭಾರತೀಯ ವಾಯು ಪಡೆ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುತ್ತಾ ಪಾಕ್ ವಾಯು ಪಡೆಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು