
ನಿವೃತ್ತಿ ಅಂಚಿನಲ್ಲಿ ಮಿಗ್-21 ಯದ್ಧ ವಿಮಾನ; ವಿಂಗ್ ಕಮಾಂಡರ್ ಅಭಿನಂದನ್ ಬಳಸಿದ್ದ ವಿಮಾನ
Team Udayavani, Sep 20, 2022, 7:15 AM IST

ನವದೆಹಲಿ: ಭಾರತೀಯ ವಾಯುಪಡೆಯ ಶಸ್ತ್ರಾಗಾರದಲ್ಲಿ ಉಳಿದಿರುವ ಮಿಗ್-21 ಯದ್ಧ ವಿಮಾನಗಳ ಪೈಕಿ ಒಂದು ವಿಮಾನವು ಸೆ.30ರಂದು ಬಳಕೆಯಿಂದ ನಿವೃತ್ತಿಯಾಗುತ್ತಿದೆ.
2019ರ ಫೆಬ್ರವರಿಯಲ್ಲಿ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಲು ಈ ವಿಮಾನವನ್ನು ವಿಂಗ್ ಕಮಾಂಡರ್(ಸದ್ಯ ಗ್ರೂಪ್ ಕಮಾಂಡರ್) ಅಭಿನಂದನ್ ವರ್ಧಮಾನ್ ಬಳಸಿದ್ದರು. ಈ ಸಾಹಸಕ್ಕಾಗಿ ಅಭಿನಂದನ್ ಅವರಿಗೆ ವೀರ ಚಕ್ರ ಪ್ರದಾನ ಮಾಡಲಾಯಿತು.
ಅಲ್ಲದೇ ಈಗ ನಿವೃತ್ತಿಯಾಗುತ್ತಿರುವ ಮಿಗ್-21 ಯುದ್ಧ ವಿಮಾನವು ಪಾಕಿಸ್ತಾನ ವಿರುದ್ಧದ 1999ರ ಕಾರ್ಗಿಲ್ ಯುದ್ಧದ “ಅಪರೇಷನ್ ಸಫೇದ್ ಸಾಗರ್’ನ ಭಾಗವಾಗಿತ್ತು.
ಸದ್ಯ ಈ ವಿಮಾನವು “ಸ್ವಾರ್ಡ್ ಆಮ್ಸ್’ ಎಂದು ಕರೆಯಲ್ಪಡುವ ಶ್ರೀನಗರದ ನಂ.51 ಸ್ಕಾರ್ಡನ್ನ ಶಸ್ತ್ರಾಗಾರದಲ್ಲಿದೆ. 2025ರ ವೇಳೆಗೆ ಎಲ್ಲ ಹಳೆಯ ನಾಲ್ಕು ಮಿಗ್-21 ಯದ್ಧ ವಿಮಾನಗಳ ನಿವೃತ್ತಿಗೆ ಐಎಎಫ್ ಯೋಜಿಸಿದೆ.
ಮಿಗ್-21 ಸೋವಿಯತ್ ಕಾಲದ ಸಿಂಗಲ್ ಎಂಜಿನ್ ಯುದ್ಧ ವಿಮಾನವಾಗಿದೆ. ಇದು ನೆಲ ಮತ್ತು ಆಗಸ ಎರಡು ಕಡೆಯಲ್ಲೂ ಶತ್ರು ವಿಮಾನಗಳನ್ನು ಸದೆಬಡಿಯುವ ಸಾಮರ್ಥ್ಯ ಹೊಂದಿದೆ. ಇದು ಒಂದು ಕಾಲದಲ್ಲಿ ಭಾರತೀಯ ವಾಯು ಪಡೆಯ ಬೆನ್ನೆಲುಬಾಗಿತ್ತು. ಪ್ರಸ್ತುತ 70 ಮಿಗ್-21 ಮತ್ತು 50 ಮಿಗ್-29 ಯುದ್ಧ ವಿಮಾನಗಳನ್ನು ಐಎಎಫ್ ಹೊಂದಿದೆ.
ಇತ್ತೀಚೆಗೆ ಮಿಗ್-21 ವಿಮಾನಗಳ ಅಪಘಾತಗಳು ಹೆಚ್ಚಾಗಿ ಸಂಭವಿಸಿದ್ದು, ಅದರ ಸುರಕ್ಷತೆ ಮತ್ತು ವ್ಯಾಲಿಡಿಟಿ ಬಗ್ಗೆ ಪ್ರಶ್ನೆಗಳು ಮೂಡಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ

ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ವಾಹನಗಳು ಗುಜರಿಗೆ: ಗಡ್ಕರಿ

ಭಾರತ್ ಜೋಡೋ ಯಾತ್ರೆ ಚುನಾವಣೆ ಗೆಲ್ಲುವುದಕ್ಕಾಗಿ ಅಲ್ಲ: ಮಲ್ಲಿಕಾರ್ಜುನ ಖರ್ಗೆ

ಆರೆಸ್ಸೆಸ್ ಆಡಳಿತ ಸಾಂವಿಧಾನಿಕ ಮೌಲ್ಯಗಳಿಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ: ಪಿಣರಾಯಿ ವಿಜಯನ್

ಮನೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ ಪತಿಯ ಮುಖದ ಮೇಲೆ ಆ್ಯಸಿಡ್ ಎರಚಿದ ಪತ್ನಿ!
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ

ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ವಾಹನಗಳು ಗುಜರಿಗೆ: ಗಡ್ಕರಿ

ಬಿಆರ್ಟಿಗೂ, ಅರಸರಿಗೂ ಅವಿನಾಭವ ಸಂಬಂಧ

ದ್ವಿಚಕ್ರ ವಾಹನ ಕಳ್ಳರ ಬಂಧನ: 12 ಬೈಕ್ ಪೊಲೀಸರ ವಶಕ್ಕೆ

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ : ಕುಮಾರಸ್ವಾಮಿ