ಐಎಎಫ್ ಎಎನ್-32 ರಕ್ಷಣಾ ಅಭಿಯಾನಕ್ಕೆ 15 ಪರ್ವತಾರೋಹಿಗಳ ಸಾಥ್
Team Udayavani, Jun 12, 2019, 5:47 PM IST
ಹೊಸದಿಲ್ಲಿ : ಕಳೆದ ಜೂನ್ 3ರಂದು ಅಸ್ಸಾಂ ನ ಜೋರ್ಹಾಟ್ ವಾಯು ನೆಲೆಯಿಂದ ಟೇಕಾಫ್ ಆದ ಅರ್ಧ ತಾಸೊಳಗೆ ನಾಪತ್ತೆಯಾಗಿ ಅರುಣಾಚಾಲ ಪ್ರದೇಶದ ಲಿಪೋ ಸಮೀಪದ ದುರ್ಗಮ, ಕಡಿದಾದ, ಎತ್ತರದ ಪರ್ವತ ಪ್ರದೇಶದಲ್ಲಿ ಪತನಗೊಂಡ IAF AN-32 ವಿಮಾನದ ಅವಶೇಷಗಳು ಪತ್ತೆಯಾದ ತಾಣವನ್ನು ತಲುಪಿ ಬದುಕುಳಿದಿರಬಹುದಾದವರನ್ನು ಪಾರು ಮಾಡುವ ಕಾರ್ಯಾಚರಣೆಯಲ್ಲಿ ಐಎಎಫ್ ತಂಡಕ್ಕೆ 15 ಮಂದಿ ಪರ್ವತಾರೋಹಿಗಳು ಸಾಥ್ ನೀಡುತ್ತಿದ್ದಾರೆ.
ಒಂದು ದಿನದ ಹಿಂದಷ್ಟೇ ವಾಯು ಪಡೆಯ ಎಎನ್-32 ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಲಾಗಿತ್ತು. ಆದರೆ ವಿಮಾನ ಪತನದ ತಾಣಕ್ಕೆ ಇಳಿಯುವ ಐಎಎಫ್ ಮತ್ತು ಸೇನೆಯ ಲಘು ಹೆಲಿಕಾಪ್ಟರ್ಗಳ ಯತ್ನ ನಿನ್ನೆ ಮಂಗಳವಾರ ಪೂರ್ತಿ ಕೈಗೂಡಿರಲಿಲ್ಲ. ಅಂತೆಯೇ ಇಂದು ಬುಧವಾರವೂ ಆ ಯತ್ನವನ್ನು ಮುಂದುವರಿಸಲಾಗಿತ್ತು.
ಇಂದು ಬುಧವಾರ ಐಎಎಫ್ ತನ್ನ 9 ರಕ್ಷಣಾ ಸಿಬಂದಿಗಳನ್ನು ಯಶಸ್ವಿಯಾಗಿ ವಿಮಾನ ಅವಶೇಷ ಪತ್ತೆಯಾದ ದುರ್ಗಮ, ಕಡಿದಾದ ಪರ್ವತ ತಾಣದಲ್ಲಿ ಇಳಿಸುವಲ್ಲಿ ಸಫಲವಾಯಿತು.
ಐಎಎಫ್ ತಂಡಕ್ಕೆ ನೆರವಾಗಲು ಮುಂದೆ ಬಂದಿರುವ 15 ಪರ್ವತಾರೋಹಿಗಳಲ್ಲಿ ಕೆಲವರು ಈಗಾಗಲೇ ವಿಮಾನ-ಪತನ ತಾಣವನ್ನು ತಲುಪಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ