ಪೊಲೀಸರಿಗೆ ಪಿಗ್ಗಿ ಬ್ಯಾಂಕ್ ಲಂಚ!
Team Udayavani, Jun 30, 2017, 3:10 AM IST
ಮೇರಠ್: ಲಂಚ ಕೊಡದಿದ್ರೆ ಪೊಲೀಸರು ಕೆಲಸ ಮಾಡಲ್ಲ ಅನ್ನೋದು ಸಾಮಾನ್ಯ ಆರೋಪ. ಇದಕ್ಕೆ ಪೂರಕವಾಗಿ, 5ರ ಬಾಲಕಿಯೊಬ್ಬಳು ತನ್ನ ತಾಯಿಯ ಕೊಲೆ ಪ್ರಕರಣವನ್ನು ಶೀಘ್ರ ತನಿಖೆ ಮಾಡುವಂತೆ ಪೊಲೀಸರಿಗೆ ನಾಣ್ಯದ ಹುಂಡಿಯನ್ನೇ ನೀಡಲು ಮುಂದಾಗಿದ್ದು, ಪೊಲೀಸರು ತಲೆತಗ್ಗಿಸುವಂತೆ ಮಾಡಿದೆ! ಬಾಲಕಿ ಮಾನ್ವಿ ಮಂಗಳವಾರ ಅಜ್ಜನೊಂದಿಗೆ ಪೊಲೀಸ್ ಐಜಿಯನ್ನು ಭೇಟಿಯಾಗಿ, ಲಂಚವಾಗಿ ತನ್ನ ಪಿಗ್ಗಿ ಬ್ಯಾಂಕ್ ನೀಡಿ, ತಾಯಿಯ ಸಾವನ್ನು ಬೇಗ ತನಿಖೆ ಮಾಡುವಂತೆ ಕೇಳಿಕೊಂಡಿದ್ದಾಳೆ. ಲಂಚ ನೀಡದ ಹೊರತು, ಕೇಸು ಪರಿಹಾರವಾಗಲ್ಲ ಎಂದು ಹೇಳಿದ್ದರಿಂದ ಆಕೆ ಈ ರೀತಿ ಮಾಡಿದ್ದಾಳೆ. ಬಾಲಕಿ ಮಾತಿಂದ ಪೋಲೀಸರು ಅವಕ್ಕಾಗಿದ್ದಾರೆ!
ಮಾನ್ವಿ ತಾಯಿ ಸೀಮಾ ಕೌಶಿಕ್ ಏಪ್ರಿಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾಗಿ ಹೇಳಲಾಗಿತ್ತು. ಅಲ್ಲದೇ ಆಕೆ ವಿರುದ್ಧ 2 ಸುಳ್ಳು ಕೇಸುಗಳನ್ನು ಪತಿ ಮನೆಯವರು ದಾಖಲಿಸಿದ್ದರು. ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಸಮಸ್ಯೆ ಪರಿಹಾರವಾಗದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಪೊಲೀಸರು ಆರೋಪಪಟ್ಟಿ ದಾಖಲಿಸದೇ, ಲಂಚ ನೀಡುವಂತೆ ಕೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿ ಐಜಿಯನ್ನು ಭೇಟಿಯಾಗಿದ್ದಾಳೆ. ಕಚೇರಿಯಿಂದ ಹೊರಬರುತ್ತಲೇ, ನಾಣ್ಯದ ಹುಂಡಿಯನ್ನು ಆಕೆ ಬೀಳಿಸಿಕೊಂಡಿದ್ದು, ಬಳಿಕ ಅತ್ತಿದ್ದು, ಎಂಥವರ ಮನವನ್ನೂ ಕಲಕುವಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ