ಗೌರವಯುತ ಸೀಟು ಕೊಡಿ ; ಮಾಯಾವತಿ
Team Udayavani, Sep 17, 2018, 11:02 AM IST
ಲಕ್ನೋ: 2019ರ ಲೋಕಸಭೆ ಚುನಾವಣೆಯಲ್ಲಿ ನಮಗೆ ಗೌರವಯುತ ಸೀಟುಗಳನ್ನು ನೀಡದೇ ಇದ್ದರೆ, ಏಕಾಂಗಿಯಾಗಿ ಹೋಗಲು ಸಿದ್ಧ ಎಂದು ಬಿಎಸ್ಪಿ ನಾಯಕಿ ಮಾಯಾವತಿ ರವಿವಾರ ಹೇಳಿದ್ದಾರೆ. ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ನಮ್ಮ ಪಕ್ಷ ವಿರೋಧಿಸುವುದಿಲ್ಲ.
ಆದರೆ, ಗೌರವಯುತ ಸೀಟುಗಳು ಸಿಕ್ಕಿದರಷ್ಟೇ ಮೈತ್ರಿಕೂಟದ ಜತೆಗೆ ಹೋಗುತ್ತೇವೆ. ಇಲ್ಲದಿದ್ದರೆ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದಿದ್ದಾರೆ ಮಾಯಾವತಿ. ಈ ಹೇಳಿಕೆಗೆ ವ್ಯಂಗ್ಯಭರಿತ ತಿರುಗೇಟು ನೀಡಿರುವ ಬಿಜೆಪಿ, “ಮಾಯಾವತಿ ಅವರು ಗೌರವಯುತ ಸೀಟುಗಳನ್ನು ಯಾರಿಂದ ಕೇಳುತ್ತಿದ್ದಾರೆ? ಅವರು ಕೇಳುವಷ್ಟು ಸೀಟುಗಳನ್ನು ಕೊಟ್ಟರೆ ಯಾರೊಂದಿಗೆ ಬೇಕಿದ್ದರೂ ಹೋಗಲು ಬಿಎಸ್ಪಿ ಸಿದ್ಧವಿದೆಯೇ’ ಎಂದು ಪ್ರಶ್ನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು