ಶಿಸ್ತಿಗೆ ಕರೆ ನೀಡಿದವರಿಗೆ “ನಿರಂಕುಶ’ ಎಂಬ ಟ್ಯಾಗ್
Team Udayavani, Sep 3, 2018, 12:35 PM IST
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಶಿಸ್ತುಬದ್ಧ ರಾಗಿರಿ ಎಂದು ಕರೆ ನೀಡುವುದನ್ನೇ “ನಿರಂಕುಶ ಪ್ರಭುತ್ವ’ ಎಂದು ವಿಶ್ಲೇಷಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೆಂಕಯ್ಯ ನಾಯ್ಡು ಅವರು ರಾಜ್ಯಸಭೆ ಸಭಾ ಪತಿಯಾಗಿ ಮತ್ತು ಉಪರಾಷ್ಟ್ರಪತಿಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ 245 ಪುಟಗಳ “ಮೂವಿಂಗ್ ಆನ್, ಮೂವಿಂಗ್ ಫಾರ್ವರ್ಡ್: ಎ ಇಯರ್ ಇನ್ ಆಫೀಸ್’ ಎಂಬ ಶಿರೋನಾಮೆಯ ಪುಸ್ತಕ ವನ್ನು ಭಾನುವಾರ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಈ ಮಾತು ಗಳನ್ನಾಡಿದ್ದಾರೆ.
“ವೆಂಕಯ್ನಾಜಿ ಶಿಸ್ತುಬದ್ಧ ವ್ಯಕ್ತಿ. ಅವರು ಶಿಸ್ತಿಗಾಗಿ ಕರೆ ಕೊಡುವುದು ಮಾತ್ರವಲ್ಲ, ಅದನ್ನು ಅವರೂ ತಪ್ಪದೇ ಪಾಲಿಸುತ್ತಾರೆ. ಆದರೆ, ನಮ್ಮ ದೇಶದಲ್ಲಿ ಪರಿಸ್ಥಿತಿ ಹೇಗಾಗಿದೆ ಎಂದರೆ ಶಿಸ್ತುಬದ್ಧರಾಗಿರಿ ಎಂದು ಹೇಳುವುದೇ ಪ್ರಜಾಪ್ರಭುತ್ವ ವಿರೋಧಿ ಎಂದು ಬಿಂಬಿಸ ಲಾಗುತ್ತದೆ. ‘ ಎಂದರು ಪ್ರಧಾನಿ ಮೋದಿ. ಉಪರಾಷ್ಟ್ರಪತಿ ಅವರಿಗೆ ಕೃಷಿಕರ ಬಗ್ಗೆ ಅನು ಕಂಪವಿದೆ. ಕೃಷಿ ಕ್ಷೇತ್ರ ಮತ್ತು ರೈತರು ಅಭಿವೃದ್ಧಿ ಹೊಂದುವುದು ಅವರಿಗೆ ಪ್ರಿಯವಾದ ವಿಚಾರ ಎಂದೂ ಮೋದಿ ಶ್ಲಾ ಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳಾದ ಮನಮೋಹನ್ಸಿಂಗ್ ಹಾಗೂ ಎಚ್. ಡಿ. ದೇವೇಗೌಡ, ಪ್ರತಿಪಕ್ಷಗಳ ನಾಯಕರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ