ಭಯೋತ್ಪಾದನೆ ಸಮಸ್ಯೆ ಅಲ್ಲ ಎಂದ ಮೇಲೆ ರಾಹುಲ್ ಗೆ SPG ಭದ್ರತೆ ಯಾಕೆ?
Team Udayavani, Apr 6, 2019, 12:36 PM IST
ಹೈದರಾಬಾದ್: ಭಯೋತ್ಪಾದನೆಯೊಂದು ಸಮಸ್ಯೆ ಅಲ್ಲ ಎಂದಾದ ಮೇಲೆ ನಿಮಗೆ (ರಾಹುಲ್ ಗಾಂಧಿ) ನೀಡಿರುವ ಎಸ್ ಪಿಜಿ ಭದ್ರತೆಯನ್ನು ವಾಪಸ್ ಪಡೆಯುವಂತೆ ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ಭಯೋತ್ಪಾದನೆ ದೊಡ್ಡ ಸಮಸ್ಯೆ ಅಲ್ಲ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ರಾಹುಲ್ ಹೇಳುತ್ತಾರೆ ಭಯೋತ್ಪಾದನೆ ಸಮಸ್ಯೆ ಅಲ್ಲ ಉದ್ಯೋಗ ದೊಡ್ಡ ಸಮಸ್ಯೆಯಾಗಿದೆಯಂತೆ. ರಾಹುಲ್ ಗಾಂಧೀಜಿ ನಾನು ನಿಮಗೆ ಹೇಳುತ್ತೇನೆ, ಒಂದು ವೇಳೆ ಭಯೋತ್ಪಾದನೆ ಸಮಸ್ಯೆ ಅಲ್ಲ ಎಂದಾದರೆ ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂದೇ ಅರ್ಥ. ಹೀಗಾಗಿ ನೀವ್ಯಾಕೆ ತಿರುಗಾಡುವ ಸ್ಥಳದಲ್ಲೆಲ್ಲಾ ಎಸ್ ಪಿಜಿ ಭದ್ರತೆ ಇಟ್ಟುಕೊಂಡಿದ್ದೀರಿ?
ಮಾಜಿ ಪ್ರಧಾನಿ(ನಿಮ್ಮ ತಂದೆ) ರಾಜೀವ್ ಗಾಂಧಿ ಅವರ ಹತ್ಯೆಯಾದ ದಿನದಿಂದ ಈವರೆಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಎಸ್ ಪಿಜಿ ಭದ್ರತೆ ಇದೆ. ಒಂದು ವೇಳೆ ನಿಮಗೆ ಭಯೋತ್ಪಾದನೆ ಸಮಸ್ಯೆ ಅಲ್ಲಾ ಎಂದು ಭಾವಿಸಿದರೆ, ತಮಗೆ ಎಸ್ ಪಿಜಿ ಭದ್ರತೆಯ ಅಗತ್ಯವಿಲ್ಲ ಎಂದು ಕೇಂದ್ರಕ್ಕೆ ಪತ್ರ ಮುಖೇನ ತಿಳಿಸಿ. ಯಾಕೆಂದರೆ ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂದು ನಿಮಗನಿಸಿದೆ. ಅಲ್ಲದೇ ನೀವು ಯಾರಿಗೂ ಹೆದರುವವರೂ ಅಲ್ಲ ಎಂದು ಸುಷ್ಮಾ ಚಾಟಿ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ