ಸಾಲ ಕೊಡದಿದ್ದರೆ ಪರಿಸ್ಥಿತಿ ಕಠಿನ: ಜೆಟ್ ಏರ್ವೇಸ್
Team Udayavani, Mar 13, 2019, 12:30 AM IST
ಹೊಸದಿಲ್ಲಿ: ಹಣಕಾಸು ಬಿಕ್ಕಟ್ಟಿಗೆ ಒಳಗಾಗಿರುವ ಖಾಸಗಿ ರಂಗದ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಕೂಡಲೇ 750 ಕೋಟಿ ರೂ. ನೆರವು ನೀಡಬೇಕು ಎಂದು ಪಾಲುದಾರ ಸಂಸ್ಥೆ ಎತಿಹಾದ್ ಸಂಸ್ಥೆಗೆ ಮನವಿ ಮಾಡಿದೆ. ನೆರವು ಸಿಗದೇ ಇದ್ದರೆ ಸಂಸ್ಥೆಯ ಮತ್ತಷ್ಟು ವಿಮಾನಗಳು ಹಾರಾಟ ನಡೆಸುವುದನ್ನು ರದ್ದು ಮಾಡಬೇಕಾದೀತು ಎಂದು ಸಂಸ್ಥೆಯ ಅಧ್ಯಕ್ಷ ನರೇಶ್ ಗೋಯಲ್ ಸೋಮವಾರ ಹೇಳಿದ್ದಾರೆ. ಈ ಬಗ್ಗೆ ಎತಿಹಾದ್ ಸಿಇಒ ಟೋನಿ ಡೊಗ್ಲಾಸ್ಗೆ ಬರೆದಿರುವ ಪತ್ರದಲ್ಲಿ ಪಸ್ತಾಪ ಮಾಡಿದ್ದಾರೆ. ನಾಗರಿಕ ವಿಮಾನಯಾನ ಖಾತೆ ಸಚಿವಾಲಯ ಷೇರುಗಳನ್ನು ಅಡವಿಟ್ಟು ಮಧ್ಯಂತರ ಸಾಲ ಪಡೆಯುವ ಪ್ರಸ್ತಾಪಕ್ಕೂ ಅನುಮೋದನೆ ನೀಡಿದೆ ಎಂಬ ಅಂಶವನ್ನೂ ಪ್ರಸ್ತಾಪಿಸಿದ್ದಾರೆ. ಜೆಟ್ಗೆ ನೆರವು ನೀಡುವ ಬಗ್ಗೆ ಶೀಘ್ರವೇ ಎತಿಹಾದ್ ಆಡಳಿತ ಮಂಡಳಿ ನಿರ್ಣಯ ಕೈಗೊಳ್ಳಲಿದೆ. ಮತ್ತೂಂದು ಬೆಳವಣಿಗೆಯಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಸ್ಥೆಗೆ 2,050 ಕೋಟಿ ರೂ. ಸಾಲ ನೀಡಲಿದೆ ಎಂಬ ವರದಿಗಳನ್ನು ಜೆಟ್ ಏರ್ವೇಸ್ ಅಲ್ಲಗಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ