ಸರ್ವಿಸ್ ಚಾರ್ಜ್ ಕೇಳಿದ್ರೆ ನ್ಯಾಯಾಲಯಕ್ಕೆ ಹೋಗಿ
Team Udayavani, Jul 10, 2017, 3:45 AM IST
ಹೊಸದಿಲ್ಲಿ: ರೆಸ್ಟಾರೆಂಟ್, ಹೋಟೆಲ್ಗಳಲ್ಲಿ ಊಟ, ಕಾಫಿ ಸೇವನೆ ಬಳಿಕ ಬಿಲ್ನಲ್ಲಿ ಸರ್ವಿಸ್ ಚಾರ್ಜ್ ಮುದ್ರಿತವಾಗಿದ್ದರೆ ಕೋರ್ಟ್ಗೆ ಹೋಗಿ. ಇದು ಕೇಂದ್ರ ಸರಕಾರ ಗ್ರಾಹಕರಿಗೆ ನೀಡಿದ ಸಲಹೆ. ಆದರೆ ರಾಷ್ಟ್ರೀಯ ರೆಸ್ಟಾರೆಂಟ್ಗಳ ಮಾಲೀಕರ ಒಕ್ಕೂಟ (ಎನ್ಆರ್ಎಐ) ಸರಕಾರದ ಆದೇಶಕ್ಕೆ ಕೆಂಡಾಮಂಡಲವಾಗಿದೆ.
ಜಿಎಸ್ಟಿ ಆರಂಭವಾಗುವುದಕ್ಕೆ ಮೊದಲೇ ಸರ್ವಿಸ್ ಚಾರ್ಜ್ ಬಗ್ಗೆ ಜಟಾಪಟಿಗಳು ಆರಂಭವಾಗಿದ್ದವು. ಶನಿವಾರ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹೋಟೆಲ್ಗಳು, ರೆಸ್ಟಾರೆಂಟ್ಗಳು ಸರ್ವಿಸ್ ಚಾರ್ಜ್ ವಿಧಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದೆ. ಅದೊಂದು ಗ್ರಾಹಕನ ವತಿಯಿಂದ ಆತ ಇಷ್ಟ ಪಟ್ಟರೆ ಮಾತ್ರ ನೀಡಬೇಕಾದ ಶುಲ್ಕ ಎಂದು ಅವಿನಾಶ್ ಕೆ.ಶ್ರೀವಾಸ್ತವ ಎಂದು ಹೇಳಿದ್ದಾರೆ. ಈ ಬಗ್ಗೆ ಏಪ್ರಿಲ್ನಲ್ಲಿಯೇ ಸುತ್ತೋಲೆ ಹೊರಡಿಸ ಲಾಗಿತ್ತು. ಹೋಟೆಲ್ಗಳು ಅದನ್ನು ಉಲ್ಲಂಘನೆ ಮಾಡುವುದು ಕಂಡು ಬಂದರೆ ಗ್ರಾಹಕರು ಕೋರ್ಟ್ ಮೆಟ್ಟಿಲೇರಬಹುದು ಎಂದಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಎನ್ಆರ್ಎಐ ಸರ್ವಿಸ್ ಚಾರ್ಜ್ ಪಡೆಯುವುದು ಕಾನೂನಿನ ಉಲ್ಲಂಘನೆ ಅಲ್ಲ. ನಿಯಮಗಳು ಕಾನೂನು ಅಲ್ಲ. ಸರಕಾರದ ಹೇಳಿಕೆ ಜನರಲ್ಲಿ ಗೊಂದಲ ಉಂಟು ಮಾಡುತ್ತದೆ ಎಂದು ಒಕ್ಕೂಟ ಹೇಳಿದೆ.
ವಿವರ ಕಡ್ಡಾಯ: ಮುಂದಿನ ವರ್ಷದಿಂದ ಆನ್ಲೈನ್ಗಳಲ್ಲಿ ಮಾರಾಟ ಮಾಡುವ ಎಲ್ಲ ವಸ್ತುಗಳಲ್ಲಿ ಎಂಆರ್ಪಿ ಮತ್ತು ಇತರ ವಿವರಗಳು ಮುದ್ರಿತವಾಗಿರುವುದು ಕಡ್ಡಾಯ ಎಂದು ಕೇಂದ್ರ ಹೇಳಿದೆ. ಮಳಿಗೆಗಳಲ್ಲಿರುವ ವಸ್ತುಗಳಲ್ಲಿ ಯಾವ ರೀತಿ ಮುದ್ರಿತವಾಗಿರುತ್ತದೆಯೋ ಅದೇ ಮಾದರಿಯಲ್ಲಿ ಆನ್ ಲೈನ್ನಲ್ಲಿರುವ ವಸ್ತುಗಳಿಗೂ ನಿಯಮ ಕಡ್ಡಾಯವೆಂದಿದೆ ಸರಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ