ತಾಪಮಾನ ಹೆಚ್ಚಾದರೆ ರಾಹುಲ್ ವಿದೇಶಕ್ಕೆ: ಅಮಿತ್ ಶಾ ಲೇವಡಿ
Team Udayavani, May 3, 2019, 6:14 AM IST
ಭಾರತದಲ್ಲಿ ತಾಪಮಾನ ಹೆಚ್ಚಾದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ. ಮಧ್ಯ ಪ್ರದೇಶದ ಬಿಯೋರಾ ಎಂಬಲ್ಲಿ ಗುರುವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಅಧ್ಯಕ್ಷರು ಹೋಗುವ ಸ್ಥಳದ ಬಗ್ಗೆ ತಾಯಿಗೆ ಕೂಡ ಮಾಹಿತಿ ಇರುವುದಿಲ್ಲ’ ಎಂದಿದ್ದಾರೆ. 2014ರಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ದಿನವೂ ಕೂಡ ರಜೆ ತೆಗೆದುಕೊಂಡಿಲ್ಲ. ಅವರು ದೇಶಕ್ಕಾಗಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷರು ಪದೇ ಪದೆ ರಜೆ ತೆಗೆದುಕೊಂಡು ವಿದೇಶಕ್ಕೆ ಹೋಗುತ್ತಾರೆ. ಅವರು ತೆರಳುವ ಸ್ಥಳದ ಬಗ್ಗೆ ತಾಯಿಯವರಿಗೂ ಮಾಹಿತಿ ಇರುವುದಿಲ್ಲ ಎಂದು ಹೇಳಿದ್ದಾರೆ.
ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನರೇಂದ್ರ ಮೋದಿ ವಿಶ್ವಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.