ಪಾಕ್ ಒಂಟಿ ಎಂದ ಇಮ್ರಾನ್
Team Udayavani, Aug 31, 2019, 5:15 AM IST
ಹೊಸದಿಲ್ಲಿ: ಇಡೀ ವಿಶ್ವ ಬಿಡಿ, ಮುಸ್ಲಿಂ ರಾಷ್ಟ್ರಗಳೂ ನಮ್ಮ ಜತೆಗಿಲ್ಲ… ಹೀಗಾಗಿ ನಾವು ಒಂಟಿಯಾಗಿ ಹೋರಾಟ ನಡೆಸಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ವತಃ ಜನರೆದುರು ತಮ್ಮ ವೈಫಲ್ಯವನ್ನು ಶುಕ್ರವಾರ ಒಪ್ಪಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ 12.30ರ ವರೆಗೆ ಕಾಶ್ಮೀರಕ್ಕಾಗಿ ಎದ್ದು ನಿಲ್ಲುವ ಮೂಲಕ ನಾವು ಕಾಶ್ಮೀರದ ಜನರೊಂದಿಗೆ ಇದ್ದೇವೆ ಎಂಬ ಸಂದೇಶ ನೀಡಿದ್ದೇವೆ ಎಂದಿರುವ ಇಮ್ರಾನ್ ಖಾನ್, ಪ್ರತಿ ಶಾಲೆ, ವಿ.ವಿ. ಹಾಗೂ ಕಚೇರಿಗಳಲ್ಲಿ ಇದನ್ನು ಪ್ರತೀ ವಾರ ಆಚರಿಸಬೇಕು ಎಂದಿದ್ದಾರೆ. ಇದೇ ವೇಳೆ ಇಡೀ ಜಗತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನದ ಜತೆಗಿಲ್ಲ ಎಂದು ಹೇಳುವ ಮೂಲಕ ತಮ್ಮ ರಾಜತಾಂತ್ರಿಕ ವೈಫಲ್ಯವನ್ನೂ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ಸುಧಾರಿಸುತ್ತಿದೆ ಪರಿಸ್ಥಿತಿ
ಕಾಶ್ಮೀರದ ಕುಪ್ವಾರದಲ್ಲಿ ಶುಕ್ರವಾರ ಮೊಬೈಲ್ ಸೇವೆಗಳನ್ನು ಭಾಗಶಃ ಆರಂಭಿಸಲಾಗಿದೆ. ಪೋಸ್ಟ್ ಪೇಯ್ಡ ಸಂಪರ್ಕಗಳಿಗೆ ಮಾತ್ರ ಮೊಬೈಲ್ ನೆಟ್ವರ್ಕ್ ಲಭ್ಯವಾಗಿದೆ. ಹೊರಹೋಗುವ ಕರೆಗಳಿಗೆ ಇನ್ನೂ ನಿಷೇಧ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.
ಮೋದಿ ಟೀಕೆ ವೇಳೆ ಕರೆಂಟ್ ಶಾಕ್!
ಪಾಕಿಸ್ಥಾನದ ರೈಲ್ವೇ ಸಚಿವ ಶೇಖ್ ರಶೀದ್ ಅಹಮದ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿರುವಾಗ ಮೈಕ್ನಿಂದ ವಿದ್ಯುತ್ ಶಾಕ್ ಹೊಡೆದಿದೆ. ಕಾಶ್ಮೀರ್ ಹವರ್ ರ್ಯಾಲಿಯಲ್ಲಿ ರಶೀದ್ ಅಹಮದ್ ಮಾತನಾಡುತ್ತಿದ್ದರು. ಮೋದಿ ನಿಮ್ಮ ಉದ್ದೇಶ ಏನು ಎಂದು ನಮಗೆ ಗೊತ್ತಿದೆ. ಎಂದು ಹೇಳುತ್ತಿದ್ದಂತೆಯೇ ಕೈಯಲ್ಲಿ ಹಿಡಿದಿದ್ದ ಮೈಕ್ನಿಂದ ಶಾಕ್ ಹೊಡೆದಿದೆ. ಆದರೂ ಭಾಷಣ ಮುಂದುವರೆಸಿ ಮೋದಿಗೆ ಈ ರ್ಯಾಲಿ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
RCB: ಈ ಸಲ ಕಪ್ ನಮ್ಮದು…