ಇಮ್ರಾನ್ ಹೊಸ ಪ್ರಧಾನಿ, ಅವರಿಗೊಂದು ಚಾನ್ಸ್ ಕೊಡಬೇಕು: ಮೆಹಬೂಬ
Team Udayavani, Feb 19, 2019, 12:21 PM IST
ಶ್ರೀನಗರ : ”ಪುಲ್ವಾಮಾ ಉಗ್ರ ದಾಳಿಯಲ್ಲಿ ಪಾಕ್ ಶಾಮೀಲಾಗಿರುವುದಕ್ಕೆ ಪುರಾವೆ ಇರುವುದರಿಂದಲೇ ಭಾರತ, ಪಾಕಿಸ್ಥಾನವನ್ನು ಹೊಣೆ ಮಾಡಿದೆ; ನಿಮ್ಮ ದೇಶ ಎಲ್ಲಕ್ಕಿಂತ ಮೊದಲು ನುಡಿದಂತೆ ನಡೆಯಬೇಕು” ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಚಾಟಿ ಬೀಸಿದ್ದಾರೆ.
”ಪಠಾಣ್ಕೋಟ್ ಉಗ್ರ ದಾಳಿಯ ಬಗ್ಗೆಯೂ ನಿಮಗೆ ಪುರಾವೆ ನೀಡಲಾಗಿತ್ತು. ಆದರೂ ನೀವು ಆ ಬಗ್ಗೆ ಕ್ರಮತೆಗೆದುಕೊಳ್ಳಲಿಲ್ಲ” ಎಂದು ಇಮ್ರಾನ್ ಗೆ ಮೆಹಬೂಬ ತಿರುಗೇಟು ನೀಡಿದ್ದಾರೆ.
”ಹಾಗಿದ್ದರೂ ಇಮ್ರಾನ್ ಖಾನ್ ಈಚೆಗಷ್ಟೇ ದೇಶದ ಪ್ರಧಾನಿ ಆಗಿರುವುದರಿಂದ ಅವರಿಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಒಂದು ಚಾನ್ಸ್ ಕೊಡಬೇಕು” ಎಂದಿರುವ ಮೆಹಬೂಬ, ”ಪಾಕ್ ವಿರುದ್ಧದ ಯುದ್ಧದ ಮಾತುಗಳು ಮುಂಬರುವ ಚುನಾವಣೆಯಿಂದಾಗಿ ಕೇಳಿ ಬರುತ್ತಿವೆಯೇ ಹೊರತು ಬೇರೇನೂ ಅಲ್ಲ” ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇಂದು ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ, ‘ಪಾಕಿಸ್ಥಾನ ಈ ಪ್ರಾಂತ್ಯದಲ್ಲಿ ಸ್ಥಿರತೆಯನ್ನು ಬಯಸುತ್ತದೆ; ಪುಲ್ವಾಮಾ ಉಗ್ರ ದಾಳಿಯನ್ನು ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೂರಕವಿರುವ ಪುರಾವೆಗಳನ್ನು ಹೊಸದಿಲ್ಲಿ ಕೊಟ್ಟರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ