ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು; ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ

ಸಮಸ್ತ ಸ್ವಾಭಿ ಮಾನಿ ಭಾರತೀಯರಿಗೆ ಪ್ರಧಾನಿ ಮೋದಿ ಬಹಿರಂಗ ಪತ್ರ; 'ಏಕ ಭಾರತ, ಶ್ರೇಷ್ಠ ಭಾರತ' ಪರಿಕಲ್ಪನೆಯನ್ನು ಎತ್ತಿಹಿಡಿದಿದ್ದಕ್ಕೆ ಪ್ರಜೆಗಳಿಗೆ‌ ಶ್ಲಾಘನೆ

Team Udayavani, May 31, 2020, 7:57 AM IST

ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು; ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ

ಹೊಸದಿಲ್ಲಿ: ನಿತ್ಯ 16 – 18 ಗಂಟೆ ದೇಶಕ್ಕಾಗಿ ದುಡಿಮೆ. ವಿರಾಮದ ಜಪವಿಲ್ಲ. ಕೊಂಚವೂ ದಣಿಯದೆ ಪ್ರಚಂಡ ಉತ್ಸಾಹದಲ್ಲಿ 6 ವರ್ಷದಿಂದ ಭಾರತವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2.0 ಸರಕಾರದ ಮೊದಲ ವರ್ಷ ಎಂದಿನಂತೆ ಇರಲಿಲ್ಲ.

ಮುಟ್ಟಿದ್ದೆಲ್ಲ ಸಾಧನೆಗಳಾಗಿ, ಇಟ್ಟಿದ್ದೆಲ್ಲ ಐತಿಹಾಸಿಕ ಹೆಜ್ಜೆಗಳಾಗಿ ಮುನ್ನುಗ್ಗುವಾಗ ಸವಾಲುಗಳೂ ಧುತ್ತನೆ ಎದ್ದುಬಂದವು.

ಆದರೂ ಈ 1 ವರ್ಷದ ಕಿರು ಅವಧಿಯ ಪಥದುದ್ದಕ್ಕೂ ಮೋದಿ ಸರ್ಕಾರ ಮೈಲುಗಲ್ಲುಗಳನ್ನು ನೆಟ್ಟಿದೆ. ಅವುಗಳನ್ನೆಲ್ಲ ನೆನೆಯುತ್ತಾ, ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶವಾಸಿಗಳಿಗೆ ಚೈತನ್ಯ ತುಂಬಲು ಪ್ರಧಾನಿ ಮೋದಿ ಶನಿವಾರ ದೇಶ ಬಾಂಧವರಿಗೆ ಅತ್ಯಾಪ್ತ ಪತ್ರ ಬರೆದಿದ್ದಾರೆ.

‘ಕಳೆದ ವರ್ಷ ಈ ದಿನ (ಮೇ 30, 2019) ಭಾರತೀಯ ಪ್ರಜಾ ಪ್ರಭುತ್ವದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಆರಂಭವಾಯಿತು. ಸಾಮಾನ್ಯ ದಿನಗಳಲ್ಲಿ ನಾನು ನಿಮ್ಮ ನಡುವೆ ಇದ್ದು, ಸರ್ಕಾರದ ಈ ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದ್ದೆ. ಆದರೆ, ಕೋವಿಡ್ ನ ಸಂದಿಗ್ಧತೆ ಅದಕ್ಕೀಗ ಅನುಮತಿಸುತ್ತಿಲ್ಲ. ಅದಕ್ಕಾಗಿ ಈ ಪತ್ರದ ಮೂಲಕ ನಿಮ್ಮ ಆಶೀರ್ವಾದ ಪಡೆಯುತ್ತಿದ್ದೇನೆ’ ಎಂದು ಆರಂಭದಲ್ಲೇ ಮೋದಿ, ತಾವು ಪತ್ರ ಬರೆಯಲು ಹಿಂದಿರುವ ಸಕಾರಣ ತಿಳಿಸಿದ್ದಾರೆ.

‘ಕೋವಿಡ್ ವೈರಾಣು ದೇಶಕ್ಕೆ ದಾಳಿಗೈದಾಗ ಭಾರತ ನಲುಗಿ ಹೋಗುತ್ತೆ ಅಂತಲೇ ಹಲವರು ಊಹಿಸಿದ್ದರು. ಆದರೆ, ವಿಶ್ವದ ಪ್ರಬಲ ಮತ್ತು ಸಮೃದ್ಧ ದೇಶಗಳಿಗೂ ಸಾಟಿ ಇಲ್ಲದಂತೆ,ಲಾಕ್‌ಡೌನ್‌ ನಿಯಮ ಪಾಲನೆಯಲ್ಲಿ “ಏಕ ಭಾರತ, ಶ್ರೇಷ್ಠ ಭಾರತ’ ಪರಿಕಲ್ಪನೆಯನ್ನು ಎತ್ತಿಹಿಡಿದಿದ್ದೀರಿ. ಚಪ್ಪಾಳೆ ತಟ್ಟಿ, ದೀಪಗಳನ್ನು ಬೆಳಗಿ ಕೋವಿಡ್ ಯೋಧರನ್ನು ಗೌರವಿಸಿದ್ದೀರಿ’ ಎಂದು ಶ್ಲಾಘಿಸಿ ದ್ದಾರೆ. ಪತ್ರದ ಇನ್ನುಳಿದ ಸಾರಾಂಶ ಅವರದೇ ಮಾತುಗಳಲ್ಲಿ ಹೀಗಿದೆ…

ಮಿಡಿತ-ತುಡಿತ: ಇಷ್ಟು ದೊಡ್ಡ ಪ್ರಮಾಣದ ಬಿಕ್ಕಟ್ಟು ಎದುರಿಸುವಾಗ ಅನನುಕೂಲ ಸಂಭವಿಸಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾರೆ. ನಮ್ಮ ಕಾರ್ಮಿಕರು, ವಲಸೆ ಕಾರ್ಮಿಕರು, ಸಣ್ಣ ಪ್ರಮಾಣದ ಕೈಗಾರಿಕೆಗಳ ಕುಶಲಜೀವಿಗಳು, ವ್ಯಾಪಾರಿಗಳು, ಅಲ್ಲದೆ ಇತರೆ ದೇಶವಾಸಿಗಳು ಭಾರೀ ದುಃಖಕ್ಕೆ ಗುರಿಯಾಗಿದ್ದಕ್ಕೆ ಖೇದವಿದೆ. ನಾವೆಲ್ಲರೂ ದುಡಿದು ಅವರ ಕಣ್ಣೀರು ಒರೆಸೋಣ. ಅದರ ಜತೆಯಲ್ಲೇ, ಕೋವಿಡ್ ವಿಚಾರದಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಮಾದರಿಯಲ್ಲೇ, ಆರ್ಥಿಕ ಪುನರುಜ್ಜೀವನದಲ್ಲೂ ವಿಶ್ವದ ಮುಂದೆ ಸೂಕ್ತ ಉದಾಹರಣೆಯಾಗಿ ಭಾರತವನ್ನು ನಿಲ್ಲಿಸೋಣ.

ಸ್ವಾವಲಂಬಿ ಭಾರತ ಕಟ್ಟಬೇಕಿದೆ: ಈ ಸಂದಿಗ್ಧ ಕಾಲಾವಧಿಯಲ್ಲಿ ನಾವು ಸ್ವಾವಲಂಬಿಗಳಾಗಲು, ಆತ್ಮನಿರ್ಭರ ಭಾರತ ಕಟ್ಟಲು 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಅನ್ನು ಮೀಸಲಿಡಲಾಗಿದೆ. ಇದು ಪ್ರತಿ ಭಾರತೀಯನ ಮುಂದೆ ಅವಕಾಶಗಳನ್ನು ತೆರೆದಿಟ್ಟು, ಹೊಸಯುಗಕ್ಕೆ ನಾಂದಿ ಹಾಡಲಿದೆ. ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಅಥವಾ ಸ್ಟಾರ್ಟ್‌ಅಪ್‌ನ ಯುವಕರಿಗೂ ಇದರ ಪ್ರಯೋಜನ ದಕ್ಕಲಿದೆ. ಇದು ಆಮದು ತಗ್ಗಿಸಿ, ಸ್ವಾವಲಂಬಿ ಭಾರತವನ್ನು ಸೃಷ್ಟಿಸುತ್ತದೆ.

ಅನವರತ ದುಡಿಯುತ್ತಿರುವೆ: ‘ದೇಶದ ಸವಾಲುಗಳನ್ನು ಗೆಲ್ಲಲು ಹಗಲು- ರಾತ್ರಿ ದುಡಿಯುತ್ತಿದ್ದೇನೆ. ಒಂದು ಪಕ್ಷ ನನ್ನಲ್ಲಿ ನ್ಯೂನತೆಗಳು ಇರಬಹುದು; ಆದರೆ ದೇಶದಲ್ಲಿ ಯಾವುದೇ ಕೊರತೆಗಳೂ ಇಲ್ಲ. ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೆಂದರೆ ನೀವು, ನಿಮ್ಮ ಬೆಂಬಲ, ಆಶೀರ್ವಾದ ಮತ್ತು ನಿಮ್ಮ ಪ್ರೀತಿ’. “ಕೃತಂ ಮೆ ದಕ್ಷಿಣೆ ಹಸ್ತೆ, ಜಯೋ ಮೆ ಸತ್ಯ ಆಹಿತಃ’ ಎಂಬ ಮಾತುಂಟು. ಇದರರ್ಥ- “ನಾವು ಒಂದು ಕಡೆ ಕ್ರಿಯೆ, ಕರ್ತವ್ಯದಲ್ಲಿ ಮುಳುಗಿದರೆ, ಮತ್ತೂಂದೆಡೆ ಯಶಸ್ಸು ಖಚಿತವಾಗುತ್ತದೆ’ ಎಂದು. ನನ್ನ ದೇಶಕ್ಕಾಗಿ ಯಶಸ್ಸನ್ನು ಪ್ರಾರ್ಥಿಸುತ್ತಾ, ಮತ್ತೂಮ್ಮೆ ನಿಮಗೆ ನಮಸ್ಕರಿಸುತ್ತೇನೆ.

ನಿಮಗೆ, ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು’.

ನಿಮ್ಮ ಪ್ರಧಾನ ಸೇವಕ

– ನರೇಂದ್ರ ಮೋದಿ

(ಒಟ್ಟಾರೆ ಇಡೀ ಪತ್ರದಲ್ಲಿ ಭರವಸೆಯ ಬಿಂಬಗಳೇ ತುಂಬಿಕೊಂಡಿವೆ. ನಿನ್ನೆಯ ಭಾರತದ ಅವಲೋಕನ, ನಾಳೆಯ ಭಾರತದ ಚಿತ್ರಗಳು ಸ್ಪಷ್ಟವಾಗಿವೆ)

ಚಾರಿತ್ರಿಕ ಸಾಧನೆ ಉಲ್ಲೇಖ
– ಕಾಶ್ಮೀರದ 370ನೇ ವಿಧಿ ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವವನ್ನು ಹೆಚ್ಚಿಸಿದೆ.
– ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ತೀರ್ಪು, ಶತಮಾನಗಳ ರಾಮಮಂದಿರ ಸಮಸ್ಯೆಗೆ ಸೌಹಾರ್ದ ಅಂತ್ಯ ಕಲ್ಪಿಸಿದೆ.
– ತ್ರಿವಳಿ ತಲಾಖ್‌ ಇತಿಹಾಸದ ಕಸದ ಬುಟ್ಟಿಗೆ ಸೇರಿದೆ.
– ಪೌರತ್ವ ಕಾಯ್ದೆ ತಿದ್ದುಪಡಿ, ಭಾರತದ ಕಾರುಣ್ಯ ಮತ್ತು ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿದೆ.
– ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆ ರಚನೆ ಮೂರೂ ದಳಗಳೊಂದಿಗೆ ಸಮನ್ವಯತೆ ಸಾಧಿಸಿದೆ.

ನಾವು ಮಾಡಿದ್ದು, ನೀವು ಕಂಡಿದ್ದು
– ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯಡಿ ಒಂದು ವರ್ಷದಲ್ಲಿ 72 ಕೋಟಿ ರೂ.ಗಳಿಗೂ ಅಧಿಕ ಹಣ 9.50 ಕೋಟಿ ರೈತರ ಖಾತೆಗಳಿಗೆ ಜಮೆ.
– ಜಲಜೀವನ್‌ ಮಿಷನ್‌ ಯೋಜನೆಯಡಿ 15 ಕೋಟಿಗೂ ಅಧಿಕ ಗ್ರಾಮೀಣ ಕುಟುಂಬಗಳಿಗೆ ಪೈಪ್‌ ಮೂಲ ಕ ಶುದ್ಧ ಜಲ ವಿತರಣೆ ಗುರಿ.
– 50 ಕೋಟಿ ಜಾನುವಾರುಗಳ ಉತ್ತಮ ಆರೋಗ್ಯಕ್ಕಾಗಿ ಉಚಿತ ವ್ಯಾಕ್ಸಿನೇಷನ್‌ ನಡೆಸುವ ಬೃಹತ್‌ ಅಭಿಯಾನ ಚಾಲ್ತಿ.
– ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ 60 ವರ್ಷ ದಾಟಿದ ಹಿರಿಯರಿಗೆ ಮಾಸಿಕ 3 ಸಾವಿರ ರೂ.ಗಳ ಅನಿಯಮಿತ ಪಿಂಚಣಿಯ ಭರವಸೆ.
– ಮೀನುಗಾರರಿಗೆ ಬ್ಯಾಂಕ್‌ ಸಾಲ ಸೌಲಭ್ಯ ಪಡೆಯುವ ಜತೆಗೆ, ಪ್ರತ್ಯೇಕ ಇಲಾಖೆ ರಚನೆ.
– ವ್ಯಾಪಾರಿಗಳ ಸಮಸ್ಯೆಗಳನ್ನು ಪರಿಹರಿಸಲು ‘ವ್ಯಾಪಾರಿ ಕಲ್ಯಾಣ್‌ ಮಂಡಳಿ’ಯನ್ನು ಸ್ಥಾಪಿಸಲು ನಿರ್ಧಾರ.
– ಸ್ವಸಹಾಯ ಗುಂಪುಗಳ 7 ಕೋಟಿಗೂ ಅಧಿಕ ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ನೆರವು. ಸ್ವಸಹಾಯ ಸಂಘಗಳಿಗೆ 10 ಲಕ್ಷ ರೂ. ಸಾಲದ ಮೊತ್ತ ಈಗ ಗ್ಯಾರಂಟಿ ಇಲ್ಲದೆ 20 ಲಕ್ಷ ರೂ.ಗೆ ಏರಿಕೆ.

ಟಾಪ್ ನ್ಯೂಸ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.