ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಲೋಕಾರ್ಪಣೆ
ಶ್ರೀನಗರವನ್ನು ದೇಶದ ಇತರೆ ಭಾಗಗಳಿಗೆ ಬೆಸೆಯುವ ಚೆನಾಬ್ ಸೇತುವೆ
Team Udayavani, Aug 13, 2022, 7:44 PM IST
ಶ್ರೀನಗರ: ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರವನ್ನು ದೇಶದ ಇತರೆ ಭಾಗಗಳಿಗೆ ಸಂಪರ್ಕಿಸುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಶನಿವಾರ ಉದ್ಘಾಟಿಸಲಾಗಿದೆ.
ಒಂದೇ ಒಂದು ಕಮಾನಿನ ಮೇಲೆ 359 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಇದಕ್ಕೂ ಹಿಂದೆ ಚೀನಾದ ಗಿಝೌ ಪ್ರಾಂತ್ಯದ ಬೆಪಾಂಜಿಯಾಂಗ್ ನದಿಯ ಮೇಲೆ 275 ಮೀಟರ್ ಎತ್ತರದಲ್ಲಿ ನಿರ್ಮಿಸಿದ ಸೇತುವೆಗೆ ಅತ್ಯಂತ ಎತ್ತರದ ಸೇತುವೆಯೆಂಬ ಹೆಗ್ಗಳಿಕೆಯಿತ್ತು.
ಚೆನಾಬ್ ನದಿಯ ಮೇಲ್ಭಾಗದಲ್ಲಿ ನಿರ್ಮಿಸಲಾಗಿರುವ ಒಂದೇ ಒಂದು ಕಮಾನಿನ ಮೇಲೆ 1.35 ಕಿ.ಮೀ. ಉದ್ದದ ಸೇತುವೆ ಸಿದ್ಧವಾಗಿದೆ. 28,000 ಕೋಟಿ ರೂ. ವೆಚ್ಚದಲ್ಲಿ ಮುಂಬೈ ಮೂಲದ ಮೂಲಸೌಕರ್ಯ ನಿರ್ಮಾಣ ಸಂಸ್ಥೆ ಆಫ್ಕಾನ್ಸ್ ಇದನ್ನು ನಿರ್ಮಿಸಿದೆ. ಇದರ ಮೂಲಕ ಉಧಾಂಪುರ-ಶ್ರೀನಗರ-ಬಾರಾಮುಲ್ಲ ರೈಲುಮಾರ್ಗವನ್ನು ಬೆಸೆಯಬಹುದು.
ವಿಶೇಷಗಳೇನು?
- ಸದಾ ಭೂಕುಸಿತ ಸಂಭವಿಸುವ ಪ್ರದೇಶದಲ್ಲಿ, ಅತ್ಯಂತದಲ್ಲಿ ಎತ್ತರದಲ್ಲಿ ಸೇತುವೆಯನ್ನು ನಿರ್ಮಿಸಿದ್ದೇ ಒಂದು ಅಸಾಮಾನ್ಯ ಸಾಧನೆ.
- ಇದು ಐಫೆಲ್ ಟವರ್ಗಿಂತ 35 ಮೀಟರ್ ಹೆಚ್ಚುವರಿ ಎತ್ತರ ಹೊಂದಿದೆ.
- ಈ ಸೇತುವೆ ಜಮ್ಮುಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿದೆ. ಇದು ಸಲಾಲ್ ಎ ಮತ್ತು ದುಗ್ಗಾ ರೈಲು ನಿಲ್ದಾಣಗಳನ್ನು ಬೆಸೆಯಲಿದೆ.
- ಈ ಸೇತುವೆಗೆ ಬಳಸಲಾಗಿರುವ ಕಂಬಗಳು 17. ಹಾಗೆಯೇ 28,660 ಮೆಟ್ರಿಕ್ ಟನ್ ಉಕ್ಕನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಕೇವಲ ಕಮಾನಿನ ತೂಕವೇ 10,619 ಮೆಟ್ರಿಕ್ ಟನ್ಗಳಷ್ಟಿದೆ.
- ಮೈನಸ್ 40 ಸೆಲ್ಸಿಯಸ್ಗೆ ಉಷ್ಣಾಂಶ ಇಳಿದರೂ ತಾಳಿಕೊಳ್ಳುವ ಸಾಮರ್ಥ್ಯ ಈ ಸೇತುವೆಗಿದೆ.
- ಇದರ ಬಾಳಿಕೆ ಅವಧಿ 120 ವರ್ಷಗಳು. 100 ಕಿ.ಮೀ. ವೇಗದಲ್ಲಿ ಇದರ ಮೇಲೆ ರೈಲುಗಳು ಸಂಚರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ