ಬೆಂಕಿ ಹಚ್ಚಿ ಆನೆ ಕೊಂದರು!
Team Udayavani, Jan 23, 2021, 6:58 AM IST
ಚೆನ್ನೈ: ಮಾನವನ ಕ್ರೂರತ್ವಕ್ಕೆ ಕೆಟ್ಟ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಾಸಿನಗುಡಿ ಎಂಬಲ್ಲಿ ಆನೆಯೊಂದನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.
ರೆಸಾರ್ಟ್ವೊಂದರಲ್ಲಿ ಈ ಘಟನೆ ನಡೆದಿದ್ದು, ಇಲ್ಲಿಗೆ ಬಂದ ಆನೆಯನ್ನು ಓಡಿಸುವ ಸಂಬಂಧ ಟೈರ್ವೊಂದಕ್ಕೆ ಬೆಂಕಿ ಹಚ್ಚಿ ಅದರ ಮೇಲೆ ಎಸೆದಿದ್ದಾರೆ. ಅದು ಸರಿಯಾಗಿ ಹೋಗಿ ಅದರ ತಲೆ ಮೇಲೆ ಬಿದ್ದಿದೆ. ಬೆಂಕಿ ಹತ್ತಿಕೊಂಡ ಟೈರ್ನೊಂದಿಗೇ ಆನೆ ಅಲ್ಲಿಂದ ಓಡಿ ಹೋಗಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಆನೆಯನ್ನು ನೋಡಿದ ಅರಣ್ಯ ಅಧಿಕಾರಿಗಳು, ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆನೆ ಪ್ರಾಣ ಬಿಟ್ಟಿದೆ. ಆನೆಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗಂಭೀರವಾದ ಸುಟ್ಟ ಗಾಯಗಳಿಂದ ಮೃತಪಟ್ಟಿದೆ ಎಂಬ ವರದಿ ಬಂದಿದೆ. ಈ ಘಟನೆ ಸಂಬಂಧ ರೆಸಾರ್ಟ್ನ ಇಬ್ಬರನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ