ಸ್ಟಾರ್ ಹೊಟೇಲ್ಗೆ 25 ಲಕ್ಷ ರೂ. ನಾಮ!
Team Udayavani, Sep 3, 2021, 6:31 AM IST
ನವೀ ಮುಂಬಯಿ: ತ್ರೀ ಸ್ಟಾರ್ ಹೊಟೇಲೊಂದರಲ್ಲಿ ಎಂಟು ತಿಂಗಳ ಹಿಂದೆ ಎರಡು ಕೊಠಡಿಗಳನ್ನು ಬುಕ್ ಮಾಡಿದ್ದ ಮುಂಬಯಿಯ ಅಂಧೇ ರಿಯ ನಿವಾಸಿಯಾದ ಮುರಳಿ ಕಾಮತ್ ಎಂಬಾತ, ಒಟ್ಟು 25 ಲಕ್ಷ ರೂ. ಬಾಡಿಗೆ ಯಾಗುವವರೆಗೆ ಅಲ್ಲಿಯೇ ಇದ್ದು, ಬಿಲ್ ಚುಕ್ತಾ ಮಾಡುವ ಸಂದರ್ಭ ಬಂದಾಗ ತಾನಿದ್ದ ಕೊಠಡಿಯ ಬಾತ್ರೂಂ ಕಿಟಕಿ ಮುರಿದು ಪರಾರಿಯಾಗಿರುವ ಘಟನೆ ಇತ್ತೀಚೆಗೆ ನವೀ ಮುಂಬಯಿಯಲ್ಲಿ ನಡೆದಿದೆ.
2020 ನವೆಂಬರ್ನಲ್ಲಿ ಹೊಟೇಲ್ಗೆ ಆಗಮಿಸಿದ್ದ. ತಾನೊಬ್ಬ ಚಿತ್ರರಂಗದ ವ್ಯಕ್ತಿಯೆಂದು ಹೇಳಿಕೊಂಡಿದ್ದ ಆತ ಎರಡು ಸೂಪರ್ ಡೀಲಕ್ಸ್ ಕೊಠಡಿ ಗಳನ್ನು ಬಾಡಿಗೆಗೆ ಪಡೆದಿದ್ದ. ತಿಂಗಳ ಅನಂತರ ಕೊಠಡಿಗಳ ಬಾಡಿಗೆ ನೀಡು ವು ದಾಗಿ ಹೇಳಿ, ಬಾಡಿಗೆ ಖಾತ್ರಿಗಾಗಿ ತನ್ನ ಪಾಸ್ಪೋರ್ಟನ್ನು ಹೊಟೇಲ್ನವರಿಗೆ ಒಪ್ಪಿಸಿದ್ದ. ಪದೇ ಪದೆ ಕೇಳಿದರೂ ಬಾಡಿಗೆ ನೀಡದ ಆತನನ್ನು ವಿಚಾರಣೆ ನಡೆಸಲು ಕೊಠಡಿಗೆ ಬಂದ ಸಿಬಂದಿಗೆ ಆತ ಪರಾರಿ ಯಾಗಿರುವುದು ಬಹಿರಂಗ ವಾಗಿದೆ. ದೂರು ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ